Advertisement

ಹೆಚ್ಚಿದ ಮಳೆ: ರೈತರಿಗೆ ಬೆಳೆ ನಷ್ಟದ ಆತಂಕ

06:20 PM Jul 20, 2021 | Team Udayavani |

ಲಕ್ಷ್ಮೇಶ್ವರ: ಕಳೆದ ಮೂರ್‍ನಾಲ್ಕು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಗೆ ತಾಲೂಕಿನಾದ್ಯಂತ 10ಕ್ಕೂ ಹೆಚ್ಚು ಮನೆಗಳು ಬಿದ್ದಿವೆ. ಬೆಳೆಯಲ್ಲಿ ನೀರು ನಿಂತು ಬೆಳೆ ತೇವಾಂಶ ಹೆಚ್ಚಳ, ರೋಗಬಾಧೆಯಿಂದ ಬೆಳೆನಷ್ಟವಾಗುವ ಆತಂಕ ಎದುರಾಗಿದೆ. ಕೃಷಿ, ವ್ಯಾಪಾರ ವಹಿವಾಟು, ಸಂಚಾರಕ್ಕೆ ಮಳೆ ಅಡ್ಡಿಯಾಗಿದ್ದು ಒಟ್ಟಿನಲ್ಲಿ ಬಿಡುವು ಕೊಡದ ಮಳೆಯಿಂದ ಜನಜೀವನ ಕೊಂಚ ಅಸ್ತವ್ಯಸ್ಥಗೊಂಡಿದೆ.

Advertisement

ಸೋಮವಾರ ಪಟ್ಟಣಕ್ಕೆ ವ್ಯಾಪಾರ, ಗೊಬ್ಬರ-ಕ್ರಿಮಿನಾಶಕ ಖರೀದಿಗೆ ಬಂದಿದ್ದ ಗ್ರಾಮೀಣ ಪ್ರದೇಶಗಳ ಜನರು ಮಳೆಯಿಂದ ತೊಂದರೆ ಅನುಭವಿಸಿದರು. ಕೃಷಿ ಕೆಲಸಕ್ಕೆ ಹೋದ ಕೂಲಿಕಾರರು ರೈತರು ಮನೆಗೆ ವಾಪಸ್‌ ಬಂದರು. ತಹಶೀಲ್ದಾರ್‌ ಭ್ರಮರಾಂಬ ಗುಬ್ಬಿಶೆಟ್ಟಿ ಪ್ರತಿಕ್ರಿಯಿಸಿ, ಮಳೆಗೆ ತಾಲೂಕಿನಲ್ಲಿ ಈಗಾಗಲೇ 22 ಮನೆಗಳು ಬಿದ್ದ ಬಗ್ಗೆ ವರದಿಯಾಗಿದೆ.

ರವಿವಾರ ಮತ್ತು ಸೋಮವಾರದ ಮಳೆಯಿಂದ ಲಕ್ಷ್ಮೇಶ್ವರ, ಶಿಗ್ಲಿ, ಯಳವತ್ತಿ, ಸೂರಣಗಿ, ಕುಂದ್ರಳ್ಳಿ, ಮಾಡಳ್ಳಿ ಯತ್ತಿನಹಳ್ಳಿ, ಗುಲಗಂಜಿಕೊಪ್ಪ ಮತ್ತಿರರ ಕಡೆ 10ಕ್ಕೂ ಹೆಚ್ಚು ಮನೆಗಳು ಕುಸಿದಿವೆ. ಮಳೆ ಬಿಡುವು ಕೊಡದ್ದರಿಂದ ಮನೆಗಳು ಬೀಳುವ ಸಂಖ್ಯೆ ಹೆಚ್ಚುತ್ತಿದ್ದು, ತಾವು ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ದಾಖಲೆ ಕಲೆ ಹಾಕುತ್ತಿದ್ದೇವೆ. ಈ ಬಗ್ಗೆ ಜಿಲ್ಲಾಧಿಕಾರಿಗೆ ಮಾಹಿತಿ ನೀಡಲಾಗುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next