Advertisement

ಇಂದಿನಿಂದ ಸರಕಾರಿ ಬಸ್‌ ಸಂಚಾರ ಹೆಚ್ಚಳ

08:54 PM Jun 23, 2021 | Team Udayavani |

ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಲಾಕ್‌ಡೌನ್‌ ತೆರವುಗೊಂಡಿದ್ದು, ಜನ ಸಂಚಾರ ಹೆಚ್ಚಾಗುತ್ತಿರುವ ಹಿನ್ನೆಲೆ ಯಲ್ಲಿ ಉಡುಪಿ ಕೆಎಸ್‌ಆರ್‌ಟಿಸಿ ಘಟಕದಲ್ಲಿ ಜೂ.24ರಿಂದ ಹೆಚ್ಚುವರಿ ಬಸ್‌ ಓಡಾಟ ನಡೆಸಲು ನಿರ್ಧರಿಸಿದೆ.

Advertisement

ಜಿಲ್ಲೆಯಲ್ಲಿ ವಾಣಿಜ್ಯ ಚಟುವಟಿಕೆ ಗಳು, ನಿರ್ಮಾಣ ಕಾಮಗಾರಿ ಗಳು, ವೃತ್ತಿ ಬದುಕು ಮತ್ತೆ ಪ್ರಾರಂಭಗೊಂಡಿವೆ. ಬುಧವಾರ ನಗರದಲ್ಲಿ ಸಾರ್ವಜನಿಕ ಸಂಚಾರ ವ್ಯವಸ್ಥೆ ಕೊರತೆಯ ಹಿನ್ನೆಲೆಯಲ್ಲಿ ದ್ವಿಚಕ್ರ ವಾಹನ, ಕಾರು, ಆಟೋ ಸಂಚಾರ ನಗರದಲ್ಲಿ ಹೆಚ್ಚಾಗಿ ಕಂಡು ಬಂತು. ಇದರಿಂದಾಗಿ ನಗರದಲ್ಲಿ ಬೆಳಗ್ಗೆ 10ರಿಂದ 12ವರೆಗೆ ಟ್ರಾಫಿಕ್‌ ಜಾಂ ಉಂಟಾಗಿತ್ತು.

ಹೆಚ್ಚುವರಿ ಬಸ್‌ :

ಉಡುಪಿ -ಕುಂದಾಪುರ ಮಾರ್ಗವಾಗಿ 12 ಕೆಎಸ್‌ಆರ್‌ಟಿಸಿ ಬಸ್‌ಗಳು, ಕಾರ್ಕಳ ಮಾರ್ಗವಾಗಿ 7, ಮಂಗಳೂರು ಮಾರ್ಗ ವಾಗಿ 4 ಬಸ್‌ ಸೇರಿದಂತೆ ಒಟ್ಟು 53 ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚಾರ ನಡೆಸಲಿದೆ. ಬುಧವಾರ ಒಟ್ಟು 41 ಬಸ್‌ಗಳು ಸಂಚರಿಸಿವೆ. ಮುಂದಿನ ದಿನದಲ್ಲಿ ಬೇಡಿಕೆಗೆ ತಕ್ಕಂತೆ ಬಸ್‌ಗಳನ್ನು ಹಂತ ಹಂತವಾಗಿ ಹೆಚ್ಚಿಸಲಾಗುತ್ತದೆ ಎಂದು ಉಡುಪಿ ಕೆಎಸ್‌ಆರ್‌ಟಿಸಿ ಡಿಪೋ ಮ್ಯಾನೇಜರ್‌ ಉದಯ ಕುಮಾರ್‌ ಶೆಟ್ಟಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next