Advertisement

ಬ್ರಹ್ಮೇಶ್ವರ ದೇಗುಲದಲ್ಲಿ ಕಳ್ಳತನಕ್ಕೆ ಯತ್ನ

07:59 PM Feb 19, 2021 | Team Udayavani |

ಕಿಕ್ಕೇರಿ: ಹೊಯ್ಸಳರ ಕಾಲದ ಬ್ರಹ್ಮೇಶ್ವರ ದೇಗುಲಕ್ಕೆ ದುಷ್ಕರ್ಮಿಗಳು ನುಗ್ಗಿ ಕಳ್ಳತನಕ್ಕೆ ಯತ್ನಿಸಿರುವ ಘಟನೆ ಕಿಕ್ಕೇರಿಯಲ್ಲಿ ನಡೆದಿದೆ. ಇದೇ ರೀತಿ ಕುರುಹಿನಶೆಟ್ಟಿ ಸಮಾಜದ

Advertisement

ಸಿದ್ಧಾರೂಢಸ್ವಾಮಿ ಮಠ, ನವಗ್ರಹ ದೇಗುಲದಲ್ಲಿ ಕಳ್ಳತನಕ್ಕೆ ಯತ್ನಿಸಿ, ಹುಂಡಿಯಲ್ಲಿದ್ದ ಹಣ ದೋಚಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಬ್ರಹ್ಮೇಶ್ವರ ದೇಗುಲದ ಭಾರಿ ಗಾತ್ರದ ಮರದ ಬಾಗಿಲು ಮುರಿದಿದ್ದಾರೆ. ಬ್ರಹ್ಮೇಶ್ವರ ದೇಗುಲದ ದ್ವಾರ ಬಾಗಿಲಿನಲ್ಲಿದ್ದ ಮರದ ಬಾಗಿಲು, ಬೀಗ ಮುರಿದು, ಮತ್ತೂಂದು ಕಬ್ಬಿಣದ ಬಾಗಿಲು ಮುರಿಯಲು ಸಾಧ್ಯವಾಗದೆ ವಾಪಸ್ಸಾಗಿದ್ದಾರೆ. ನವಗ್ರಹ ಹಾಗೂ ಸಿದ್ಧಾರೂಢ ಸ್ವಾಮಿ ದೇವಾಲಯದ ಕಬ್ಬಿಣದ ಬಾಗಿಲು ಮುರಿದು ಹುಂಡಿಯಲ್ಲಿದ್ದ ಹಣ ದೋಚಿ ಪರಾರಿಯಾಗಿದ್ದಾರೆ.

ಪದೇ ಪದೆ ದೇಗುಲದಲ್ಲಿ ಕಳ್ಳತನ ಆಗುತ್ತಿದ್ದು, ರಕ್ಷಣೆಗಾಗಿ ಸೂಕ್ತ ಕಾವಲುಗಾರರು, ಸಿಸಿ ಕ್ಯಾಮೆರಾ ಅಳವಡಿಸಲು ಭಕ್ತರು ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಕಿಕ್ಕೇರಿ ಪಿಎಸ್‌ಐ ಎಚ್‌.ಕೆ. ನವೀನ್‌ ಸಿಬ್ಬಂದಿಗಳೊಂದಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next