Advertisement

ಪಟಾಕಿ ಸಿಡಿದು ಕೈಸುಟ್ಟುಕೊಂಡ ಬಾಲಕ

05:06 PM Oct 26, 2022 | Team Udayavani |

ಹುಣಸೂರು: ಪಟಾಕಿ ಸಿಡಿದು ಬಾಲಕನೊಬ್ಬ ಕೈಸುಟ್ಟು ಕೊಂಡಿರುವ ಘಟನೆ ಮಂಗಳವಾರ ಸಂಜೆ ತಾಲೂಕಿನ ಕಿರಂಗೂರಿನಲ್ಲಿ ನಡೆದಿದೆ.

Advertisement

ಹುಣಸೂರು ತಾಲೂಕಿನ ಕಿರಂಗೂರು ಗ್ರಾಮದ ಹೇಮಂತಕುಮಾರ್ ರವರ ಪುತ್ರ ಹಿತೇಶ್(10) ಎರಡೂ ಕೈಗಳು ಸುಟ್ಟುಕೊಂಡಿರುವಾತ.

ದೀಪಾವಳಿ ಹಬ್ಬದ ಸಂಭ್ರಮದಲ್ಲಿದ್ದ ಹೇಮಂತಕುಮಾರ್ ಕುಟುಂಬದವರು ಪಟಾಕಿ ಹೊಡೆಯುತ್ತಿದ್ದ ವೇಳೆ ಇವರ ಪುತ್ರ ಹಿತೇಶ್  ಕೈಯಲ್ಲಿ ಸುರ್ ಸುರ್ ಬತ್ತಿ ಹಿಡಿದು  ಹೂವಿನ ಕುಂಡ ಹಚ್ಚಿಸುತ್ತಿದ್ದಂತೆ ಒಮ್ಮೆಲೆ ಡಬ್ ಎಂದು ಬೆಂಕಿ ಹತ್ತಿ ಸಿಡಿದಿದೆ. ಮನೆಯವರು ಶಬ್ದ ಕೇಳಿ ಮಗನತ್ತ ನೋಡುವಷ್ಟರಲ್ಲಾಗಲೇ ಎರಡು ಕೈಗಳಲ್ಲಿ ಸುಟ್ಟಗಾಯಗಳಾಗಿದ್ದು. ತಕ್ಷಣವೇ ಹನಗೋಡು ಆಸ್ಪತ್ರೆಗೆ ಕರೆತಂದು  ಚಿಕಿತ್ಸೆ ಕೊಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next