Advertisement

ಚೇಳೂರು: ಅತ್ತಿಗೆಯ ಕುತ್ತಿಗೆಗೆ ಚಾಕುವಿನಿಂದ ಇರಿದು ಕೊಲೆ

12:51 PM Nov 05, 2022 | Team Udayavani |

ಚೇಳೂರು:  ಅತ್ತಿಗೆಯ ಕುತ್ತಿಗೆಗೆ ಚಾಕುಯಿಂದ ಇರಿದು ಕೊಲೆ ಮಾಡಿರುವ ಘಟನೆ ಚೇಳೂರಿನಲ್ಲಿ ನಡೆದಿದೆ.

Advertisement

ತ್ರಿಶಾ (35) ಮೃತ ಮಹಿಳೆ. ರಘು ಕೊಲೆಗೈದ ಆರೋಪಿ.

ಘಟನೆ ಹಿನ್ನೆಲೆ: ಶನಿವಾರ ಬೆಳಗ್ಗೆ ಮೃತಳ ಗಂಡ ವಿಜಯಕುಮಾರ್ ಹಾಗೂ ಅಣ್ಣ ತಮ್ಮಂದಿರು ಹಣಕಾಸಿನ ವಿಷಯಕ್ಕೆ ನಡೆಯುತ್ತಿದ್ದ ವೇಳೆ ಜಗಳದ ಮಧ್ಯದಲ್ಲಿ ಬಂದ ತ್ರಿಶಾ ಅವರಿಗೆ ಮೈದುನ ರಘು ಸಿಟ್ಟಿನಲ್ಲಿ ಚಾಕುವಿನಿಂದ ಕುತ್ತಿಗೆಗೆ ಹಿರಿದು ಪರಾರಿಯಾಗಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದ ತ್ರಿಶಾ ಪ್ರಾಣ ಬಿಟ್ಟಿದ್ದಾರೆ.

ಕೊಲೆ ಮಾಡಿ ಓಡಿ ಹೋಗಿದ್ದ ರಘುವನ್ನು ಆತನ ಮೊಬೈಲ್‌ ಲೊಕೇಶನ್ ನಿಂದ ಪತ್ತೆ ಪಿಎಸ್ಐ ನವೀನ್ ಕುಮಾರ್ ಹಾಗೂ ಸಿಬ್ಬಂದಿಗಳು ಬಂಧಿಸಿದ್ದಾರೆ.

ಇವರುಗಳೆಲ್ಲರೂ ಕೊರಟಗೆರೆ ತಾಲೂಕಿನ ಶಿಕಾರಿಪುರದ ವಾಸಿಗಳು ಇವರು ಗ್ರಾಮದ ಹೊರವಲಯದಲ್ಲಿ  ಬಟ್ಟೆಗಳ ಟೆಂಟು ಹಾಕಿಕೊಂಡು ಹಳೆಯ ಗುಜರಿ ಸಾಮಾನು ಇತರ ವ್ಯಾಪಾರಗಳನ್ನು ಮಾಡಿಕೊಂಡು ಇದ್ದವರು ಎಂದು ತಿಳಿದುಬಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next