Advertisement

ಬೆಂಕಿ ಹಚ್ಚಿ ಆನೆ ಕೊಂದರು!

01:50 AM Jan 23, 2021 | Team Udayavani |

ಚೆನ್ನೈ: ಮಾನವನ ಕ್ರೂರತ್ವಕ್ಕೆ ಕೆಟ್ಟ ಉದಾಹರಣೆ ಎಂಬಂತೆ ತಮಿಳುನಾಡಿನ ನೀಲಗಿರಿ ಜಿಲ್ಲೆಯ ಮಾಸಿನಗುಡಿ ಎಂಬಲ್ಲಿ ಆನೆಯೊಂದನ್ನು ಬೆಂಕಿ ಹಚ್ಚಿ ಹತ್ಯೆ ಮಾಡಲಾಗಿದೆ.

Advertisement

ರೆಸಾರ್ಟ್‌ವೊಂದರಲ್ಲಿ ಈ ಘಟನೆ ನಡೆದಿದ್ದು, ಇಲ್ಲಿಗೆ ಬಂದ ಆನೆಯನ್ನು ಓಡಿಸುವ ಸಂಬಂಧ ಟೈರ್‌ವೊಂದಕ್ಕೆ ಬೆಂಕಿ ಹಚ್ಚಿ ಅದರ ಮೇಲೆ ಎಸೆದಿದ್ದಾರೆ. ಅದು ಸರಿಯಾಗಿ ಹೋಗಿ ಅದರ ತಲೆ ಮೇಲೆ ಬಿದ್ದಿದೆ. ಬೆಂಕಿ ಹತ್ತಿಕೊಂಡ ಟೈರ್‌ನೊಂದಿಗೇ ಆನೆ ಅಲ್ಲಿಂದ ಓಡಿ ಹೋಗಿದೆ.  ಇದರಿಂದಾಗಿ ಗಂಭೀರವಾಗಿ ಗಾಯಗೊಂಡಿದ್ದ ಆನೆಯನ್ನು ನೋಡಿದ ಅರಣ್ಯ ಅಧಿಕಾರಿಗಳು, ಚಿಕಿತ್ಸೆಗಾಗಿ ಕರೆದೊಯ್ದಿದ್ದಾರೆ. ಆದರೆ, ಚಿಕಿತ್ಸೆ ಫ‌ಲಕಾರಿಯಾಗದೇ ಆನೆ ಪ್ರಾಣ ಬಿಟ್ಟಿದೆ. ಆನೆಯ ಕಳೇಬರದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಗಂಭೀರವಾದ ಸುಟ್ಟ ಗಾಯಗಳಿಂದ ಮೃತಪಟ್ಟಿದೆ ಎಂಬ ವರದಿ ಬಂದಿದೆ. ಈ ಘಟನೆ ಸಂಬಂಧ ರೆಸಾರ್ಟ್‌ನ ಇಬ್ಬರನ್ನು ಬಂಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next