Advertisement

Bengaluru: ತಂದೆ ಸಾಲದ ಹಣ ವಾಪಸ್‌ ಕೊಡದಕ್ಕೆ ಬಾಲಕಿ ಮೇಲೆ ರೇಪ್‌

12:47 PM Oct 21, 2024 | Team Udayavani |

ಬೆಂಗಳೂರು: ಸಾಲದ ಹಣ ವಾಪಸ್‌ ನೀಡದ ವಿಚಾರಕ್ಕೆ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಆರೋಪಿಯನ್ನು ಮಾದನಾಯಕನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ತೋಟದಗುಡ್ಡದಹಳ್ಳಿ ನಿವಾಸಿ ರವಿ ಕುಮಾರ್‌(39) ಬಂಧಿತ ಆರೋಪಿ. ಈತ ಕೆಲ ತಿಂಗಳ ಹಿಂದೆ 17 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈ ಸಂಬಂಧ ಬಾಗಲಗುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಕೃತ್ಯ ನಡೆದ ಸ್ಥಳದ ಆಧಾರದ ಮೇಲೆ ಮಾದನಾಯಕನಹಳ್ಳಿ ಠಾಣೆಗೆ ಪ್ರಕರಣ ವರ್ಗಾವಣೆ ಮಾಡಲಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿ ರವಿ ಕುಮಾರ್‌ನನ್ನು ಬಂಧಿಸಿ, ಕೋರ್ಟ್‌ಗೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಸಂತ್ರಸ್ತೆ ತಂದೆ ಕೆಲ ತಿಂಗಳ ಹಿಂದೆ ಆರೋಪಿ ರವಿ ಕುಮಾರ್‌ನಿಂದ 70 ಸಾವಿರ ರೂ. ಪಡೆದುಕೊಂಡಿದ್ದರು. 30 ಸಾವಿರ ರೂ. ವಾಪಸ್‌ ನೀಡಿದ್ದರು. ಆದರೆ, ಬಾಕಿ 40 ಸಾವಿರ ರೂ. ಹಾಗೂ ಬಡ್ಡಿ ವಾಪಸ್‌ ಕೊಟ್ಟಿರಲಿಲ್ಲ. ಇದೇ ನೆಪವೊಡ್ಡಿ ಆಗಾಗ್ಗೆ ಸಂತ್ರಸ್ತೆ ಮನೆಗೆ ಹೋಗುತ್ತಿದ್ದ ಆರೋಪಿ, ಒಮ್ಮೆ ಆಕೆಗೆ ಮುತ್ತು ಕೊಟ್ಟಿದ್ದು, ಅದನ್ನು ತನ್ನ ಮೊಬೈಲ್‌ನಲ್ಲಿ ಸೆರೆ ಹಿಡಿದುಕೊಂಡಿದ್ದ. ಬಳಿಕ ಈ ಪೋಟೋವನ್ನು ಜಾಲತಾಣದಲ್ಲಿ ಹಾಕುತ್ತೇನೆ ಹಾಗೂ ತಂದೆಯ ಸಾಲದ ಹಣದ ವಿಚಾರ ಪ್ರಸ್ತಾಪಿಸಿ ಬೆದರಿಸಿ, ಆಕೆ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next