Advertisement

ಮೊರ್ಗನಾಡು: ಮದ್ಯದ ಬಾಟಲ್‌ನಲ್ಲಿ ಹೊಡೆದು ಹಲ್ಲೆ

07:36 PM Nov 03, 2022 | Team Udayavani |

ಬಂಟ್ವಾಳ: ರಾತ್ರಿ ಹೊತ್ತು ತರಕಾರಿ ತೆಗೆದುಕೊಂಡು ಮನೆಗೆ ತೆರಳುತ್ತಿದ್ದ ವ್ಯಕ್ತಿಯೊಬ್ಬರಿಗೆ ಐವರು ಆರೋಪಿಗಳ ತಂಡ ಮದ್ಯದ ಬಾಟಲ್‌ನಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ ಘಟನೆ ಅ. 31ರಂದು ನರಿಕೊಂಬು ಗ್ರಾಮದ ಮೊರ್ಗನಾಡಿನಲ್ಲಿ ನಡೆದಿದೆ.

Advertisement

ನರಿಕೊಂಬು ಪಲ್ಲತ್ತಿಲ ನಿವಾಸಿ ಪ್ರವೀಣ್‌ಕುಮಾರ್‌ ಹಲ್ಲೆಗೊಳಗಾದವರು. ಅವರು ಅ. 31ರಂದು ರಾತ್ರಿ 9ಕ್ಕೆ ಮೊರ್ಗನಾಡಿನ ಅಂಗಡಿಯೊಂದರಿಂದ ತರಕಾರಿ ಖರೀದಿಸಿಕೊಂಡು ಮನೆಗೆ ಹಿಂದಿರುಗುತ್ತಿದ್ದ ವೇಳೆ ಐವರು ಆರೋಪಿಗಳು ಮದ್ಯದ ಬಾಟಲ್‌ನಿಂದ ಹಲ್ಲೆ ನಡೆಸಿ ಗಾಯಗೊಳಿಸಿರುವ ಜತೆಗೆ ಕೊಲ್ಲುವುದಾಗಿ ಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಬಂಟ್ವಾಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next