Advertisement

Bangalore: ಮರಳು ರಾಶಿಯಲ್ಲಿ ಹೂತಿದ್ದ ಶವ ಪತ್ತೆ ಹಚ್ಚಿದ ನಾಯಿ!

11:38 AM Oct 17, 2023 | Team Udayavani |

ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದ ಮರಳು ರಾಶಿಯಲ್ಲಿ ಶವ ಪತ್ತೆಯಾಗಿದೆ.

Advertisement

ಯಶವಂತಪುರ ನಿವಾಸಿ ರಾಜು ಎಂಬಾತನ ಮೃತದೇಹವನ್ನು ಲಗ್ಗೆರೆಯ 16ನೇ ಕ್ರಾಸ್‌ ನಲ್ಲಿ ಕಟ್ಟಡ ನಿರ್ಮಾಣಕ್ಕಾಗಿ ಮರಳಿನ ರಾಶಿ ಹಾಕಲಾಗಿತ್ತು. ಯಾರೋ ದುಷ್ಕರ್ಮಿಗಳು ರಾಜುನನ್ನು ಕೆಲ ದಿನಗಳ ಹಿಂದೆಯೇ ಹತ್ಯೆಗೈದು ಮರಳು ರಾಶಿಯಲ್ಲಿ ಬಚ್ಚಿಟ್ಟು ಪರಾರಿಯಾಗಿದ್ದರು. ಭಾನುವಾರ ಸಂಜೆ ಬೀದಿ ನಾಯಿಗಳು ಮರಳು ರಾಶಿಯನ್ನು ಕೆದರಿ ಮೃತದೇಹವನ್ನು ಹೊರ ತೆರೆಯುತ್ತಿದ್ದವು. ಅದನ್ನು ಕಂಡ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮರಳು ತೆರವುಗೊಳಿಸಿ ಮೃತದೇಹ ಹೊರಗಡೆ ತೆಗೆದಿದ್ದಾರೆ. ಆರಂಭದಲ್ಲಿ ಮೃತನ ಗುರುತು ಪತ್ತೆಯಾಗಲಿಲ್ಲ. ಆದರೆ, ಮೃತನ ಫೋಟೋಗಳನ್ನು ಬೇರೆ ಠಾಣೆಗಳಿಗೆ ಕಳುಹಿಸಿ ಪರಿಶೀಲಿಸಿದಾಗ ಯಶವಂತಪುರ ನಿವಾಸಿ ರಾಜು ಎಂಬುದು ಗೊತ್ತಾಗಿದೆ.

ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು. ಮಹಾಲಕ್ಷಿ$¾à ಲೇಔಟ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next