Advertisement

ವರ್ತುಲ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಚಾಲನೆ

07:15 AM Jun 04, 2020 | Lakshmi GovindaRaj |

ಹಾಸನ: ನಗರದ ಸಾಲಗಾಮೆ ರಸ್ತೆ ಯಿಂದ ಉದ್ದೂರು ಮೂಲಕ ರಾಷ್ಟ್ರೀಯ ಹೆದ್ದಾರಿ ಬೇಲೂರು ರಸ್ತೆ ಸಂಪರ್ಕಿಸುವ ವರ್ತುಲ ರಸ್ತೆಯ ನಿರ್ಮಾಣ ಪೂರ್ಣ ಗೊಂಡಿದ್ದು, ಆ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಶಾಸಕರ ಪ್ರೀತಂ  ಜೆ.ಗೌಡ ಬುಧವಾರ ಚಾಲನೆ ನೀಡಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಅವರು, ವರ್ತುಲ ರಸ್ತೆ ನಿರ್ಮಾಣಕ್ಕೆ ಭೂಮಿ ಬಿಟ್ಟುಕೊಟ್ಟಿರುವ ಭೂ ಮಾಲೀಕ ರಿಗೆ ಸೂಕ್ತ ಪರಿಹಾರ ನೀಡಲಾಗುತ್ತದೆ.  ವಿಶೇಷವಾಗಿ ರಸ್ತೆ ಕಾಮಗಾರಿಗೆ  ಅನುವು ಮಾಡಿಕೊಟ್ಟ ಉದ್ದೂರು ಹಾಗೂ ಉದ್ದೂರು ಕೊಪ್ಪಲಿನ ಗ್ರಾಮಸ್ಥರಿಗೆ  ಅವರು ಅಭಿನಂದನೆ ಸಲ್ಲಿಸಿದರು.

ಉದ್ದೂರು ಹಾಗೂ ಉದ್ದೂರು ಕೊಪ್ಪಲು ಗ್ರಾಮದ ರಸ್ತೆಗೆ ಅಭಿವೃದಿಟಛಿಗೆ ಬಿಡುಗಡೆಯಾಗಿರುವ 3 ಕೋಟಿ ರೂ. ಅನುದಾನದಲ್ಲಿ  1.5 ಕೋಟಿ ರೂ. ರಸ್ತೆ ಕಾಮಗಾರಿಗೆ ಬಳಕೆಯಾಗಿದೆ. ಉದ್ದೂರು ಗ್ರಾಮದ ಒಳಗಿನ ಕಾಮಗಾರಿಗೆ 2 ಕೋಟಿ ರೂ. ಅನುದಾನ ನೀಡಿದ್ದು, ಒಂದು ಕೋಟಿ ರೂ. ವೆಚ್ಚದಲ್ಲಿ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ. ಉಳಿದ ಒಂದು ಕೋಟಿ ರೂ. ನಲ್ಲಿ ರಸ್ತೆ  ಹಾಗೂ ಚರಂಡಿ ಅಭಿವೃದಿ ಕೆಲಸಕ್ಕೆ ವಿನಿಯೋಗ ಮಾಡಲಾಗಿದೆ ಎಂದು ಶಾಸಕರು ಹೇಳಿದರು.

ದೇವೇಗೌಡ ನಗರ, ಕೃಷ್ಣನಗರ, ಗವೇನಹಳ್ಳಿ ರಸ್ತೆ ಹಾಗೂ ಸೀಗೇಗುಡ್ಡದ ರಸ್ತೆ ಅಭಿವೃದಿಟಛಿಗೆ ಚಾಲನೆ ನೀಡಲಾಗಿದೆ.  ಯೋಜಿತ  ಎಲ್ಲಾ ರಸ್ತೆ ಕಾಮಗಾರಿಗಳು ಪೂರ್ಣಗೊಂಡರೆ ನಗರದ ಶೇ.50ರಷ್ಟು ಟ್ರಾಫಿಕ್‌ ಕಡಿಮೆಯಾಗುತ್ತದೆ ಎಂದು ಶಾಸಕ ಪ್ರೀತಂ ಜೆ. ಗೌಡ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next