Advertisement

ಓಂ ಶಾಂತಿ ನೂತನ ವಿಶ್ವ ಕಲ್ಯಾಣ ಭವನ ಉದ್ಘಾಟನೆ

03:45 PM Nov 15, 2021 | Team Udayavani |

ಹುಮನಾಬಾದ: ಪಟ್ಟಣದ ಹೊರವಲಯದಲ್ಲಿ ನಿರ್ಮಾಣಗೊಂಡ ಓಂ ಶಾಂತಿ ನೂತನ ವಿಶ್ವ ಕಲ್ಯಾಣ ಭವನದ ಉದ್ಘಾಟನೆ ನಡೆಯಿತು.

Advertisement

ಬ್ರಹ್ಮಕುಮಾರೀಸ್‌ ಈಶ್ವರೀಯ ವಿಶ್ವವಿದ್ಯಾಲಯದ ರಾಜಯೋಗಿನಿ ಸಂತೋಷಿ ದಿದಿ ಉದ್ಘಾಟನೆ ನೆರವೇರಿಸಿ ಮಾತನಾಡಿ, ದೇಶದಲ್ಲಿ ಭವನಗಳು ಅನೇಕ ನಿರ್ಮಾಣಗೊಳ್ಳುತ್ತವೆ. ಆದರೆ ಆ ಭವನಗಳಲ್ಲಿ ಯಾವ ಕಾರ್ಯಗಳು ನಡೆಯುತ್ತಿವೆ ಎಂಬುವುದು ಮುಖ್ಯ. ಓಂ ಶಾಂತಿ ಮೂಲಕ ಅನೇಕರು ನೆಮ್ಮದಿ ಪಡೆದುಕೊಳ್ಳುತ್ತಿದ್ದಾರೆ. ನೂತನ ವಿಶ್ವಕಲ್ಯಾಣ ಭವನ ಕೂಡ ಅನೇಕರ ಜೀವದಲ್ಲಿ ಬದಲಾವಣೆ ತರುವ ಕಾರ್ಯ ಮಾಡಲಿದೆ ಎಂದ ಅವರು, ಚಿಟಗುಪ್ಪದಲ್ಲಿ ನಿರ್ಮಾಣಗೊಳ್ಳುವ ಭವನಕ್ಕೆ ಶಾಂತಿ ಭವನ ಎಂದು ಹೆಸರು ಘೋಷಣೆ ಮಾಡಿದರು.

ಶಾಸಕ ರಾಜಶೇಖರ ಪಾಟೀಲ, ವಿಧಾನ ಪರಿಷತ್‌ ಸದಸ್ಯ ಡಾ| ಚಂದ್ರಶೇಖರ ಪಾಟೀಲ ಮಾತನಾಡಿ, ಹಣ ಗಳಿಸುವ ಹಂಬಲ ಜನರಲ್ಲಿ ಹೆಚ್ಚುತ್ತಿದ್ದು, ಜೀವನಕ್ಕೆ ಬೇಕಿರುವುದು ಮೊದಲು ನೆಮ್ಮದಿ ಎಂಬುವುದು ಮರೆಯುತ್ತಿದ್ದಾರೆ ಎಂದರು. ಪ್ರತಿಮಾ ಬಹೇನ್‌, ಪ್ರಭಾಕರ ಭಾಯಿ, ಪ್ರೇಮಾ ಪಾಟೀಲ ಸೇರಿದಂತೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next