Advertisement

ಬಿಳಿಗಿರಿಬೆಟ್ಟದಲ್ಲಿ ನೆಲಹಾಲು, ಮೆಟ್ಟಿಲು, ರಥ ನಿರ್ಮಾಣಕ್ಕೆ ಚಾಲನೆ

07:16 AM Mar 08, 2019 | Team Udayavani |

ಸಂತೆಮರಹಳ್ಳಿ: ಜಿಲ್ಲೆಯ ಭರಚುಕ್ಕಿ ಹಾಗೂ ನಂದಿ ಬೆಟ್ಟದಲ್ಲಿ ಪ್ರಥಮ ಕೇಬಲ್‌ ಕಾರ್‌ ಅಳವಡಿಸಿ ಪ್ರವಾಸೋದ್ಯಮ ಅಭಿವೃದ್ಧಿಗೆ ಶೀಘ್ರದಲ್ಲೇ ಕ್ರಮ ವಹಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್‌ ತಿಳಿಸಿದರು.

Advertisement

ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿ ಬಿಳಿಗಿರಿರಂಗನಾಥಸಾವ್ವಿು ದೇಗುಲದ ನೆಲಹಾಸು ಹಾಗೂ ಮೆಟ್ಟಿಲುಗಳ ನಿರ್ಮಾಣ ಹಾಗೂ ಹೊಸ ರಥ ನಿರ್ಮಾಣದ ಕಾಮಗಾರಿಗೆ ಗುರುವಾರ ಚಾಲನೆ ನೀಡಿ ಮಾತನಾಡಿದರು. 

ಚಾಮರಾಜನಗರ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ವಿಶೇಷ ಆಸಕ್ತಿ ವಹಿಸಿದ್ದಾರೆ. ಸಮಗ್ರ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸುವಂತೆ ನನಗೆ ಸೂಚಿಸಿದ್ದಾರೆ. ಇಲ್ಲಿ ಪ್ರವಾಸೋದ್ಯಮಕ್ಕೆ ವಿಫ‌ುಲ ಅವಕಾಶಗಳಿವೆ. ಬಿಳಿಗಿರಿಂಗನಾಥಸ್ವಾಮಿ ದೇಗುಲ ದೇಶದಲ್ಲೇ ಪ್ರಸಿದ್ಧಿ ಪಡೆದಿದೆ. ಇದರ ಜೀರ್ಣೋದ್ಧಾರ ಕಾಮಗಾರಿ ಪ್ರಗತಿಯಲ್ಲಿದ್ದು, ಸಮಗ್ರ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು.

ದೇಗುಲದ ನೆಲಹಾಸಿಗೆ 1 ಕೋಟಿ ರೂ. ಹಾಗೂ ಮೆಟ್ಟಿಲುಗಳ ನಿರ್ಮಾಣಕ್ಕೆ 4 ಕೋಟಿ ರೂ. ಬಿಡುಗಡೆಯಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗುತ್ತದೆ. ಅಲ್ಲದೆ ಜಿಲ್ಲೆಯ ಭರಚುಕ್ಕಿ, ಮದ್ಯರಂಗ, ಐತಿಹಾಸಿಕ ವೆಸ್ಲಿ ಸೇತುವೆ ಮರು ನಿರ್ಮಾಣವೂ ಸೇರಿದಂತೆ ವಿವಿಧ ಪ್ರವಾಸಿ ತಾಣ ಅಭಿವೃದ್ಧಿಗೆ ಇದುವರೆಗೆ 13 ಕೋಟಿ ರೂ. ಬಿಡುಗಡೆಯಾಗಿದೆ ಎಂದರು.

ನೆಪ ಬಿಟ್ಟು ಕೆಲಸ ಪೂರ್ಣಗೊಳಿಸಿ: ದೇಗುಲ ಅಭಿವೃದ್ಧಿ ವಿಷಯದಲ್ಲಿ ಯಾರ ದಾಕ್ಷಿಣ್ಯಕ್ಕೂ ಒಳಗಾಗಬಾರದು. ಮೆಟ್ಟಲುಗಳ ನಿರ್ಮಾಣದಲ್ಲಿ ಸ್ಥಳೀಯರಿಂದ ಬರುವ ಕೆಲವು ಸಮಸ್ಯೆಗಳನ್ನು ಆಲಿಸಿ ಇದಕ್ಕೆ ಪರಿಹಾರ ಹುಡುಕಿಕೊಳ್ಳಬೇಕು. ಇದನ್ನೇ ನೆಪ ಮಾಡಿಕೊಂಡು ಕಾಮಗಾರಿ ವಿಳಂಬ ಮಾಡಬಾರದು. ಈ ವಿಷಯದಲ್ಲಿ ಜಿಲ್ಲಾಧಿಕಾರಿ ಖಡಕ್‌ ಕ್ರಮವನ್ನು ವಹಿಸಬೇಕು ಎಂದು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿಗೆ ಸೂಚಿಸಿದರು.

Advertisement

 ಜಿಲ್ಲೆಯ ರೇಷ್ಮೆ ಪುನಶ್ಚೇತನಕ್ಕೂ 7 ಕೋಟಿ ರೂ. ನೆರವು ನೀಡಿದೆ. ಯಳಂದೂರು ಪಟ್ಟಣದ ದಿವಾನ್‌ ಪೂರ್ಣಯ್ಯ ವಸ್ತು ಸಂಗ್ರಹಾಲಯದ ಅಭಿವೃದ್ಧಿಗೂ ಇಲಾಖೆಯ ವತಿಯಿಂದ ಹಣ ನೀಡಲಾಗುವುದು. ಇದಕ್ಕೂ ಮುನ್ನ ಸುತ್ತ ಖಾಸಗಿ ವ್ಯಕ್ತಿಗಳು ಅಕ್ರಮ ಒತ್ತುವರಿ ಮಾಡಿಕೊಂಡಿರುವ ಸ್ಥಳವನ್ನು ತೆರವುಗೊಳಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.  

ಜಿಲ್ಲಾ ಉಸ್ತುವಾರಿ ಸಚಿವ ಸಿ. ಪುಟ್ಟರಂಗಶೆಟ್ಟಿ ಮಾತನಾಡಿ, ಬಿಳಿಗಿರಿರಂಗನಬೆಟ್ಟ ಅಭಿವೃದ್ಧಿಯಾದರೆ ಇಡೀ ಗ್ರಾಮವೇ ಅಭಿವೃದ್ಧಿ ಆಗುತ್ತದೆ. ಇಲ್ಲಿರುವ ಆಸ್ತಿ ದೇಗುಲದ ಹೆಸರಿನಲ್ಲಿದೆ. ದೇವಸ್ಥಾನದ ಅಭಿವೃದ್ಧಿ ಕೆಲಸಗಳಲ್ಲಿ ಸ್ಥಳೀಯರು ಸಹಕರಿಸಬೇಕು ಎಂದು ಕೋರಿದರು. ಶಾಸಕ ಎನ್‌. ಮಹೇಶ್‌ ಮಾತನಾಡಿ, ಬಿಳಿಗಿರಿರಂಗನಬೆಟ್ಟದ ದೇಗುಲದ ಜೀರ್ಣೋದ್ಧಾರ ಕಾಮಗಾರಿ ತ್ವರಿತಗತಿಯಲ್ಲಿ ಆಗಬೇಕು. ಇದಕ್ಕೆ ಇನ್ನೂ 5 ಕೋಟಿ ರೂ. ಬೇಕಿದೆ. ಆದಷ್ಟು ಬೇಗ ಈ ಹಣವನ್ನು ಬಿಡುಗಡೆ ಮಾಡಬೇಕು ಎಂದರು.

ಇದೇ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ವತಿಯಿಂದ ಸಚಿವರು, ಸಂಸದರು, ಶಾಸಕರಿಗೆ ಸನ್ಮಾನಿಸಲಾಯಿತು. ಮಾಜಿ ಶಾಸಕ ಎಸ್‌. ಬಾಲರಾಜು, ಜಿಪಂ ಅಧ್ಯಕ್ಷೆ ಶಿವಮ್ಮ, ಉಪಾಧ್ಯಕ್ಷ ಜೆ. ಯೋಗೇಶ್‌, ತಾಪಂ ಅಧ್ಯಕ್ಷ ನಿರಂಜನ್‌, ಗ್ರಾಪಂ ಅಧ್ಯಕ್ಷೆ ಸುಮತಿ, ಉಪಾಧ್ಯಕ್ಷ ಶ್ರೀನಿವಾಸ್‌, ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ, ಎಸಿ ನಿಖೀತಾಚಿನ್ನಸ್ವಾಮಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸಿ. ರಾಜಶೇಖರ್‌, ಸದಸ್ಯರಾದ ಪದ್ಮಾ, ಕಂದಹಳ್ಳಿ ಮಹೇಶ್‌, ಕೆಸ್ತೂರು ಪಿ. ಮರಿಸ್ವಾಮಿ, ಶಿವಮ್ಮ, ಎನ್‌. ರಾಜು, ದೇಗುಲದ ವೆಂಕಟೇಶ್‌ ಪ್ರಸಾದ್‌, ರವಿ, ನಾಗರಾಜಭಟ್‌, ಬಸವರಾಜು ಬಡೀಗೇರ್‌, ಶಿವಕುಮಾರ್‌, ಯಚ್ಚರೇಶ್‌ ಇತರರಿದ್ದರು.

ಜಿಲ್ಲೆ ಪುಣ್ಯಕ್ಷೇತ್ರಗಳ ನೆಲೆವೀಡು: ಚಾಮರಾಜನಗರ ಜಿಲ್ಲೆ ಪ್ರವಾಸಿ ತಾಣಗಳ ಅಗರವಾಗಿದೆ. ಜಿಲ್ಲೆ ಶೇ. 50 ಕ್ಕಿಂತಲೂ ಹೆಚ್ಚು ಕಾಡಿನಿಂದ ಆವೃತ್ತವಾಗಿದೆ. ನದಿಗಳು, ಜಲಪಾತ, ಪುರಾಣ, ಐತಿಹಾಸಿಕ ಪುಣ್ಯ ಕ್ಷೇತ್ರಗಳ ನೆಲೆವೀಡಾಗಿದೆ. ಇದರ ಅಭಿವೃದ್ಧಿಗೆ ಇನ್ನಷ್ಟು ಅನುದಾನ ಬಿಡುಗಡೆ ಮಾಡಬೇಕು.

ಅಲ್ಲದೇ ಯಳಂದೂರು ಪಟ್ಟಣದ ದಿವಾನ್‌ ಪೂರ್ಣಯ್ಯ ವಸ್ತು ಸಂಗ್ರಹಾಲಯ, ಬಳೇಮಂಟಪ, ಗೌರೇಶ್ವರ ದೇಗುಲಗಳ ಸಮುತ್ಛಯ ಇಡೀ ಜಿಲ್ಲೆಯಲ್ಲಿ ವಿಶಿಷ್ಟವಾಗಿದ್ದು, ಇದರ ಅಭಿವೃದ್ಧಿಗೂ ಇಲಾಖೆ ವತಿಯಿಂದ ಕ್ರಮ ವಹಿಸಬೇಕು ಸಂಸದ ಆರ್‌. ಧ್ರುವನಾರಾಯಣ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next