Advertisement

ಹಳೆಯಂಗಡಿ-ಕದಿಕೆ ಗ್ರಾಮೀಣ ಭಾಗದ ರಸ್ತೆಯ ಚರಂಡಿ ಎಲ್ಲಿದೆ ?

10:44 AM May 26, 2018 | Team Udayavani |

ಹಳೆಯಂಗಡಿ : ಇಲ್ಲಿನ ಹಳೆಯಂಗಡಿ ಗ್ರಾಮ ಪಂಚಾಯತ್‌ನ ಕದಿಕೆ ಗ್ರಾಮೀಣ ಭಾಗದ ರಸ್ತೆಯಲ್ಲಿ ಚರಂಡಿ ಇದ್ದರೂ, ಅದರಲ್ಲಿ ಹೂಳು ತುಂಬಿ ಚರಂಡಿಯೇ ಕಾಣದ ಸ್ಥಿತಿ ನಿರ್ಮಾಣವಾಗಿದೆ. ಇಲ್ಲಿನ ಯುವತಿ ಮತ್ತು ಮಹಿಳಾ ಮಂಡಲದ ಮುಂಭಾಗದ ರಸ್ತೆಯಲ್ಲಿ ಮೇಲ್ಮುಖವಾಗಿ ಸರಾಗವಾಗಿ ಹರಿಯಬೇಕಾದ ಮಳೆ ನೀರು ಚರಂಡಿಯಲ್ಲಿ ಹರಿಯದೇ, ನೇರವಾಗಿ ಡಾಮರು ರಸ್ತೆಯ ಮೇಲೆ ಹರಿಯುವುದರಿಂದ ಮಣ್ಣು ರಸ್ತೆ ಮೇಲೆ ಹರಡಿದೆ.

Advertisement

ಈ ಭಾಗದಲ್ಲಿ ನಿತ್ಯ ಸಂಚಾರಿಗಳಿಗೆ ಬಹಳಷ್ಟು ತೊಂದರೆ ಆಗುತ್ತಿದೆ. ಮಳೆ ಬಂದು ಕೆಸರು ಮಿಶ್ರಿತ ರಸ್ತೆಯಲ್ಲಿಯೇ ಸಂಚರಿಸಬೇಕಾದ ಅನಿವಾರ್ಯತೆ ಇದೆ. ಈ ರಸ್ತೆ ನೇರವಾಗಿ ಕದಿಕೆ ಮೂಲಕ ಪಡುಪಣಂಬೂರು ಗ್ರಾಮಕ್ಕೂ ತೆರಳುವುದರಿಂದ ಜನ ಸಂಚಾರದ ಒತ್ತಡದ ರಸ್ತೆ ಯಾಗಿಯೂ ಇದೆ. ಚರಂಡಿಯ ಹುಲ್ಲುಗಳ ಸಹಿತ ಹೂಳೆತ್ತಿದರೆ ಈ ಎಲ್ಲ ಸಮಸ್ಯೆಗೂ ಪರಿಹಾರ ಕಾಣಬಹುದು. ಇದಕ್ಕೆ ಗ್ರಾಮ ಪಂಚಾಯತ್‌ ಮುಂದಾಗಬೇಕು ಎಂದು ಆಗ್ರಹಿಸುತ್ತಾರೆ ಸ್ಥಳೀಯರು.

Advertisement

Udayavani is now on Telegram. Click here to join our channel and stay updated with the latest news.

Next