Advertisement

ಗೋವಾಕ್ಕೆ ಕೇಜ್ರಿವಾಲ್‌ 7 ಆಶ್ವಾಸನೆ

01:26 AM Sep 22, 2021 | Team Udayavani |

ಪಣಜಿ: ಗೋವಾದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧತೆ ನಡೆಸಿಕೊಳ್ಳುತ್ತಿರುವ ಆಮ್‌ ಆದ್ಮಿ ಪಕ್ಷ ರಾಜ್ಯದ ಜನತೆಗೆ ಏಳು ಆಶ್ವಾಸನೆಗಳನ್ನು ನೀಡಿದೆ.

Advertisement

ಗೋವಾಕ್ಕೆ ಬಂದಿಳಿದಿರುವ ಆಪ್‌ ನಾಯಕ, ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌, “ರಾಜಕಾರಣಿಗಳ ಸಂಪರ್ಕದಲ್ಲಿರುವವರಿಗೆ ಮಾತ್ರವೇ ಸರಕಾರಿ ಕೆಲಸ ಸಿಗುತ್ತಿರುವ ಈ ರಾಜ್ಯದಲ್ಲಿ ಎಲ್ಲರಿಗೂ ಸರಕಾರಿ ಕೆಲಸ ಲಭ್ಯವಾಗುವಂತೆ ಮಾಡಲಾಗುವುದು. ನಿರುದ್ಯೋಗದಿಂದ ಬಳಲುತ್ತಿರುವ ಕುಟುಂಬದಲ್ಲಿ ಒಬ್ಬರಿಗೆ ಕೆಲಸ ಕೊಡಿಸಲಾಗುವುದು. ಅವರಿಗೆ ಕೆಲಸ ಸಿಗುವವರೆಗೂ ತಿಂಗಳಿಗೆ 3,000 ರೂ. ಧನ ಸಹಾಯ ನೀಡಲಾಗುವುದು.

ಪ್ರವಾಸೋದ್ಯಮ ನಂಬಿಕೊಂಡು ಈಗ ಉದ್ಯೋಗ ಕಳೆದುಕೊಂಡಿರುವ ಕುಟುಂಬ ಹಾಗೂ ಗಣಿಗಾರಿಕೆ ನಂಬಿ ನಿರುದ್ಯೋಗದಲ್ಲಿರುವ ಕುಟುಂಬಗಳಿಗೆ ಕೆಲಸ ಸಿಗುವ ತನಕ ತಿಂಗಳಿಗೆ 5 ಸಾವಿರ ರೂ. ಸಹಾಯಧನ ನೀಡಲಾಗುವುದು. ರಾಜ್ಯದ ಖಾಸಗಿ ಸಂಸ್ಥೆಗಳ ಶೇ.80 ಕೆಲಸವನ್ನು ಗೋವಾದ ಜನತೆಗೆ ಮೀಸಲಿಡಲಾಗುವುದು. ಕೌಶಲ ವಿಶ್ವವಿದ್ಯಾನಿಲಯವನ್ನು ನಿರ್ಮಿಸಲಾಗುವುದು ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next