Advertisement

ನಟ ಓಂ ಪುರಿನಾ ‘ಕೊಲ್ಲಿಸಿದ್ದು’ಪ್ರಧಾನಿ ಮೋದಿ ಅಂತೆ!:ಪಾಕ್‌ ಮಾಧ್ಯಮ

03:30 PM Jan 09, 2017 | Team Udayavani |

ಹೊಸದಿಲ್ಲಿ : ಕಂಚಿನ ಕಂಠದ ಪ್ರತಿಭಾವಂತ ಚರಿತ್ರ ನಟ ಓಂ ಪುರಿ ಅವರು ಈಚೆಗೆ ತಮ್ಮ 66ರ ಹರೆಯದಲ್ಲಿ ನಿಧನ ಹೊಂದಿರುವುದು ಹಿಂದಿ ಚಿತ್ರರಂಗಕ್ಕೆ ಮಾತ್ರವಲ್ಲದೆ ಇಡಿಯ ಭಾರತೀಯ ಚಿತ್ರರಂಗಕ್ಕೆ ಭಾರೀ ಶಾಕ್‌ ಉಂಟು ಮಾಡಿತ್ತು. ಆದರೆ ಪಾಕ್‌ ಮಾಧ್ಯಮಕ್ಕೆ ಓಂ ಪುರಿ ಅವರ ಸಾವು ಸಹಜವಲ್ಲ; ಮಾತ್ರವಲ್ಲ ಅದೊಂದು ಯೋಜಿತ ಕೊಲೆ; ಮತ್ತು ಈ ಕೊಲೆಯನ್ನು ಮಾಡಿಸಿದ್ದು ಪ್ರಧಾನಿ ನರೇಂದ್ರ ಮೋದಿ ! ರಾ ಏಜಂಟರ ಮೂಲಕ !

Advertisement

ಪಾಕ್‌ ಟಿವಿಯ ವರದಿಯ ಪ್ರಕಾರ ಪ್ರಧಾನಿ  ಮೋದಿ ಮಾತ್ರವಲ್ಲದೆ, ಓಂ ಪುರಿ ಅವರ ಕೊಲೆಗೆ ಆದೇಶಿಸಿದ ಇತರರೆಂದರೆ ಪ್ರಧಾನಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿರುವ ಅಜಿತ್‌ ದೋವಾಲ್‌, ಶಿವಸೇನೆ, ಆರ್‌ಎಸ್‌ಎಸ್‌ ಮತ್ತು ರಕ್ಷಣಾ ಸಚಿವ ಮನೋಹರ್‌ ಪಾರೀಕರ್‌. ಇವರ ರಾ ಏಜಂಟರಾಗಿರುವ ರಾಜೇಶ್‌ ಮತ್ತು ಕಾಲವೀರ್‌ ಎಂಬವರಿಗೆ ಓಂ ಪುರಿಯನ್ನು ಅವರ ಮುಖಕ್ಕೆ ತಲೆದಿಂಬನ್ನು ಒತ್ತಿ ಅಥವಾ ಕುತ್ತಿಗೆ ಬಿಗಿದು ಉಸಿರುಗಟ್ಟಿ ಸಾಯಿಸುವಂತೆ ತಾಕೀತು ಮಾಡಿದ್ದರು !

ಬಿಎಸ್‌ಎಫ್ ಜವಾನ ನಿತಿನ್‌ ಯಾದವ್‌ ಅವರು ಹುತಾತ್ಮರಾದ ಸಂದರ್ಭದಲ್ಲಿ ಓಂ ಪುರಿ ಅವರು ವಿವಾದಾತ್ಮಕ ಹೇಳಿಕೆ ನೀಡಿ ಎಲ್ಲರ ಕಂಗೆಣ್ಣಿಗೆ ಗುರಿಯಾದದ್ದೇ ಅವರ ಕೊಲೆಗೆ ಕಾರಣವೆಂದು ಪಾಕ್‌ ಟಿವಿ ಮಾಧ್ಯಮ ಹೇಳಿದೆ.

ಸೇನೆಯ ಕುರಿತ ತನ್ನ ವಿವಾದಾತ್ಮಕ ಹೇಳಿಕೆಯಿಂದ ತಾನು ದೇಶದಲ್ಲಿ ಒಂಟಿಯಾಗಿ ಬಿಟ್ಟೆ ಎಂದು ಓಂ ಪುರಿ ಅವರು ಅರ್ನಾಬ್‌ ಗೋಸ್ವಾಮಿ ಅವರಿಗೆ ನೀಡಿದ್ದ ಸಂದರ್ಶನದಲ್ಲಿ  ಹೇಳಿದ್ದರು. ಓಂ ಪುರಿ  ಕೊಲೆಯನ್ನು ಅವರ ಈ ಮಾತುಗಳು ಪುಷ್ಟೀಕರಿಸುವಂತಿವೆ ಎಂದು ಪಾಕ್‌ ಟಿವಿ ಮಾಧ್ಯಮ ಕಂಡು ಕೊಂಡಿದೆ. 

ಪಾಕ್‌ ಟಿವಿ ಮಾಧ್ಯಮ ಓಂ ಪುರಿ ಅವರನ್ನು ದಿ| ಅಮರೀಶ್‌ ಪುರಿ ಮತ್ತು ಮದನ್‌ ಪುರಿ ಅವರ ಕುಟುಂಬಕ್ಕೆ ಸೇರಿಸಿರುವುದು ಕೂಡ ಅದರ ಮಾಹಿತಿ ಕೊರತೆಯನ್ನು ಎತ್ತಿ ತೋರಿಸುತ್ತದೆ. ಪಾಕ್‌ ಪರವಾಗಿ ಮತ್ತು ಭಾರತದ ವಿರುದ್ಧವಾಗಿ ಮಾತನಾಡುವ ಸೆಲೆಬ್ರಿಟಿಗಳನ್ನು ಮೋದಿ ಸರಕಾರ ಇದೇ ರೀತಿ ಕೊಲೆ ಮಾಡಬಲ್ಲುದು ಎಂಬುದನ್ನು ಕೂಡ ಪಾಕ್‌ ಟಿವಿ ಮಾಧ್ಯಮ ಸಂಶೋಧಿಸಿದೆ !

Advertisement
Advertisement

Udayavani is now on Telegram. Click here to join our channel and stay updated with the latest news.

Next