Advertisement

ಶ್ರವಣ ದೋಷವುಳ್ಳ ನ್ಯಾಯವಾದಿ ಬಾರ್‌ ಕೌನ್ಸಿಲ್‌ಗೆ ನೋಂದಣಿ

10:35 PM Dec 16, 2022 | Team Udayavani |

ನವದೆಹಲಿ: ಮೊದಲ ಬಾರಿಗೆ ದೆಹಲಿಯ ಬಾರ್‌ ಕೌನ್ಸಿಲ್‌ಗೆ ಶ್ರವಣ ದೋಷ ಹೊಂದಿರುವ ನ್ಯಾಯವಾದಿಯೊಬ್ಬರು ನೋಂದಾಯಿತರಾಗಿದ್ದಾರೆ.

Advertisement

ಸೌದಾಮಿನಿ ಪೇಠೆ(45) ಈ ಗೌರವಕ್ಕೆ ಪಾತ್ರರಾಗಿದ್ದು, ಶ್ರವಣ ದೋಷವುಳ್ಳವರ ಹಕ್ಕಿಗಾಗಿ ಹಾಗೂ ಶಿಕ್ಷಣ, ಆರೋಗ್ಯ ಮತ್ತು ನ್ಯಾಯ ಕ್ಷೇತ್ರದಲ್ಲಿ ಅವರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ.

ಸೌದಾಮಿನಿ ಅವರು ಭಾರತೀಯ ಸಾಂಕೇತಿಕ ಭಾಷೆ(ಐಎಸ್‌ಎಲ್‌) ಇಂಟರ್‌ಪ್ರಿಟರ್‌ ಸಹಾಯದಿಂದ ನ್ಯಾಯಾಲಯಗಳಲ್ಲಿ ತಮ್ಮ ವಾದವನ್ನು ಮಂಡಿಸಲಿದ್ದಾರೆ.

ಸೌದಾಮಿನಿ ಅವರು 9 ವರ್ಷವಿದ್ದಾಗ ಮೆನಿಂಜೈಟಿಸ್‌ ಸೋಂಕಿಗೆ ಒಳಗಾಗಿ ಶ್ರವಣ ದೋಷಕ್ಕೆ ತುತ್ತಾದರು. “ಶ್ರವಣ ದೋಷವುಳ್ಳವರ ಹಕ್ಕುಗಳಿಗಾಗಿ ನನ್ನ ಕಾನೂನು ಪದವಿಯನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂಬುದು ನನ್ನ ಗುರಿಯಾಗಿದೆ. ಶಿಕ್ಷಣ, ಆರೋಗ್ಯ, ನ್ಯಾಯ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಶ್ರವಣ ದೋಷವುಳ್ಳವರು ಕೆಲಸ ಮಾಡುವಂತೆ ಮಾಡಬೇಕು,’ ಎಂದು ಸೌದಾಮಿನಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next