Advertisement

ಹಿಂದಿ ರಾಷ್ಟ್ರಭಾಷೆ ಎಂದ ವೆಂಕಯ್ಯಗೆ ತೀವ್ರ ತರಾಟೆ 

03:45 AM Jun 25, 2017 | |

ಅಹಮದಾಬಾದ್‌: ಹಿಂದಿ ರಾಷ್ಟ್ರಭಾಷೆ, ಇದಕ್ಕೆ ವಿರೋಧಿಸುವುದು ಸಲ್ಲದು! ಇದು ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಅವರ ಹೇಳಿಕೆ.

Advertisement

ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಕೇಂದ್ರ ಸರ್ಕಾರ ಅನಾವಶ್ಯಕವಾಗಿ ಹಿಂದಿ ಹೇರಿಕೆ ಮಾಡುತ್ತಿದೆ ಎಂಬ ಆಕ್ರೋಶ
ಹೆಚ್ಚಾದ ಹಿನ್ನೆಲೆಯಲ್ಲಿ ಅವರು ಈ ಮಾತುಗಳನ್ನಾಡಿದ್ದಾರೆ. ಭಾರತದಲ್ಲಿ ಬಹಳಷ್ಟು ಮಂದಿ ಹಿಂದಿ ಮಾತನಾಡುತ್ತಾರೆ.

ಹೀಗಾಗಿ ಅದು ರಾಷ್ಟ್ರಭಾಷೆಯಾಗಿದೆ. ಆಯಾ ರಾಜ್ಯಗಳು ತಮ್ಮ ಮಾತೃಭಾಷೆಯನ್ನು ಹೇಗೆ ಒಪ್ಪಿಕೊಂಡಿವೆಯೋ
ಹಾಗೆಯೇ ಹಿಂದಿ ಯನ್ನು ಒಪ್ಪಿಕೊಳ್ಳಬೇಕು. ಮಾತೃಭಾಷೆ ಜತೆಗೆ ಹಿಂದಿಯನ್ನು ಕಲಿಯಬೇಕು ಎಂದಿದ್ದಾರೆ. ಆದರೆ ತಾವು ಇಂಗ್ಲಿಷ್‌ ಮಾಧ್ಯಮದ ವಿರೋಧಿಯೇನಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಾಯ್ಡು ಅವರ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಂತೂ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಕೇರಳದ ತಿರುವನಂತಪುರ ಸಂಸದ ಶಶಿ ತರೂರ್‌, ಹಿಂದಿ ರಾಷ್ಟ್ರಭಾಷೆಯೇನಲ್ಲ, ಬಹಳಷ್ಟು ಮಂದಿ ಮಾತನಾಡುವ ಭಾಷೆಯಷ್ಟೇ. ಹಾಗಂತ ಇದನ್ನು ಎಲ್ಲರ ಮೇಲೆ ಹೇರಲಾಗದು ಎಂದು ಹೇಳಿದ್ದಾರೆ. ಇನ್ನು ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಒಮರ್‌ ಅಬ್ದುಲ್ಲಾ ಅವರು ಹಿಂದಿ ರಾಷ್ಟ್ರಭಾಷೆ ಎಂದು ಯಾವಾಗ ಘೋಷಿತವಾಯಿತು? ಎಂದು ವ್ಯಂಗ್ಯವಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next