Advertisement

ಶಾಲಾ ಪಠ್ಯದಲ್ಲಿ ಮಹತ್ವದ ಕಾನೂನು ಜ್ಞಾನ: ಕೇರಳ ಸರ್ಕಾರ ನಿರ್ಧಾರ

08:40 PM Aug 30, 2022 | Team Udayavani |

ತಿರುವನಂತಪುರಂ: ಕೇರಳ ಸರ್ಕಾರ ಕೆಲವು ಮಹತ್ವದ ಕಾನೂನುಗಳನ್ನು ಶಾಲಾಪಠ್ಯದಲ್ಲಿ ಸೇರಿಸಲು ನಿರ್ಧರಿಸಿದೆ. ಉದ್ದೀಪನ ದ್ರವ್ಯಗಳು, ಪರಿಸರ ಮಾಲಿನ್ಯ, ಸೈಬರ್‌ ಅಪರಾಧಗಳು, ಮಹಿಳೆಯರ ವಿರುದ್ಧ ದೌರ್ಜನ್ಯಗಳಂತಹ ಕಾನೂನುಗಳನ್ನು ಪಠ್ಯದಲ್ಲಿ ಸೇರಿಸಲಾಗುತ್ತದೆ ಎಂದು ಅಲ್ಲಿನ ಶಿಕ್ಷಣ ಸಚಿವ ವಿ.ಶಿವನ್‌ಕುಟ್ಟಿ ಹೇಳಿದ್ದಾರೆ.

Advertisement

ಇದರಿಂದ ಮಕ್ಕಳಿಗೆ ಇಂತಹ ಕಾನೂನುಗಳ ಬಗ್ಗೆ ಜ್ಞಾನ ಬೆಳೆಯುತ್ತದೆ, ಅಲ್ಲದೇ ತಮ್ಮ ಹಕ್ಕುಗಳ ಬಗ್ಗೆಯೂ ಗೊತ್ತಾಗುತ್ತದೆ. ಹಕ್ಕುಗಳ ಬಗ್ಗೆ ತಿಳಿದುಕೊಳ್ಳುವುದು ಮಾತ್ರವಲ್ಲ, ಅವನ್ನು ರಕ್ಷಿಸುವುದು ಹೇಗೆ ಎಂಬ ತಿಳಿವಳಿಕೆಯೂ ಇರಬೇಕು ಎಂದು ಶಿವನ್‌ಕುಟ್ಟಿ ಹೇಳಿದ್ದಾರೆ.

ಪ್ರೌಢಶಾಲಾ ಹಂತದಲ್ಲೇ ಮಕ್ಕಳಿಗೆ ಇಂತಹ ಕಾನೂನುಗಳನ್ನು ತಿಳಿಸಿದರೆ, ಪಿಯುಸಿ ಮುಗಿಯುವ ಹೊತ್ತಿಗೆ ಯಾವುದು ಸಕ್ರಮ, ಯಾವುದು ಅಕ್ರಮ ಎಂದು ಅರಿವು ಮೂಡಿಸುವುದು ಸರ್ಕಾರದ ಪ್ರಯತ್ನದ ಹಿಂದಿನ ಉದ್ದೇಶ.

Advertisement

Udayavani is now on Telegram. Click here to join our channel and stay updated with the latest news.

Next