Advertisement

Imphal: ಒಳನುಸುಳುವಿಕೆ ಶಾಂತಿ ಒಪ್ಪಂದಕ್ಕೆ ಸಜ್ಜು- ಮಣಿಪುರ ಸಿಎಂ

10:02 PM Nov 26, 2023 | Pranav MS |

ಇಂಫಾಲ: ಇಂಫಾಲ ಕಣಿವೆಯಲ್ಲಿರುವ ಒಳನುಸುಳುಕೋರ ಗುಂಪಿನೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ. ಸದ್ಯದಲ್ಲೇ ಶಾಂತಿ ಒಪ್ಪಂದಕ್ಕೆ ಸಹಿ ಬೀಳಲಿದೆ ಎಂದಿದ್ದಾರೆ ಎಂದು ಮಣಿಪುರ ಮುಖ್ಯಮಂತ್ರಿ ಎನ್‌.ಬಿರೇನ್‌ ಸಿಂಗ್‌ ಹೇಳಿದ್ದಾರೆ. ಸಂದರ್ಶನದಲ್ಲಿ ಮಾತನಾಡಿದ ಅವರು, ಮಾತುಕತೆಗಳು ಪ್ರಮುಖ ಘಟ್ಟದಲ್ಲಿವೆ ಎಂದಿದ್ದರೂ, ಯಾವ ಸಂಘಟನೆಯೊಂದಿಗೆ ಈ ಮಾತುಕತೆ ನಡೆಯುತ್ತಿದೆ ಎನ್ನುವುದನ್ನು ಬಹಿರಂಗಪಡಿಸಿಲ್ಲ.

Advertisement

ಇದೇ ಮೊದಲ ಬಾರಿಗೆ ಅವರು ಅಧಿಕೃತವಾಗಿ ಮಾತುಕತೆ ನಡೆಯುತ್ತಿರುವುದನ್ನು ಖಚಿತಪಡಿಸಿದ್ದಾರೆ. ಮೇ 3ರಂದು ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಆರಂಭವಾಗಿತ್ತು. ಇದುವರೆಗೆ ಒಟ್ಟು 180 ಮಂದಿ ಬಲಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next