Advertisement

ಕೊಳೆಪೀಡಿತ ಅಡಕೆ ಬೆಳೆಗೆ ತಕ್ಷಣ ಪರಿಹಾರ ನೀಡಿ

10:26 AM Aug 30, 2018 | |

ಸಾಗರ: ಅತಿವೃಷ್ಟಿಯಿಂದ ಕೊಳೆರೋಗಕ್ಕೆ ತುತ್ತಾದ ಅಡಕೆ ಬೆಳೆಗೆ ತಕ್ಷಣ ಪರಿಹಾರ ಬಿಡುಗಡೆ ಮಾಡಬೇಕು ಹಾಗೂ ಅಕ್ರಮ ಸಾಗುವಳಿ ಸಕ್ರಮೀಕರಣ ಕಾಯ್ದೆಯಡಿ ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ಬುಧವಾರ ಕಾಂಗ್ರೆಸ್‌ ವತಿಯಿಂದ ಉಪ ವಿಭಾಗಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು.

Advertisement

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಲ್‌.ಟಿ. ತಿಮ್ಮಪ್ಪ, ತಾಲೂಕಿನಲ್ಲಿ ವಿಪರೀತ ಮಳೆಯಿಂದ ಶೇ. 80ರಷ್ಟು ಅಡಕೆ ಸಂಪೂರ್ಣ ಕೊಳೆರೋಗದಿಂದ ನಷ್ಟವಾಗಿದ್ದು, ಬೆಳೆಗಾರರು ತೀವ್ರ [ಆತಂಕದಲ್ಲಿದ್ದಾರೆ. 

2012-13ನೇ ಸಾಲಿನಲ್ಲಿ ಅಡಕೆ ಕೊಳೆರೋಗ ಬಂದಿದ್ದಾಗ ಹೆಕ್ಟೇರ್‌ಗೆ ಹನ್ನೆರಡೂವರೆ ಸಾವಿರ ರೂ. ಪರಿಹಾರವನ್ನು ಕಾಗೋಡು ತಿಮ್ಮಪ್ಪ ಅವರ ಪರಿಶ್ರಮದಿಂದ ಬೆಳೆಗಾರರಿಗೆ ದೊರಕಿತ್ತು. ಈ ಬಾರಿ ಅತಿ ಹೆಚ್ಚು ಬೆಳೆ ನಷ್ಟವಾಗಿರುವುದರಿಂದ ಸರ್ಕಾರ ಎಕರೆಗೆ 16 ಸಾವಿರ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
 
ಕಳೆದ ಸಾಲಿನಲ್ಲಿ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಬಗರ್‌ಹುಕುಂ ಸಕ್ರಮೀಕರಣ ಸಮಿತಿ ಸ್ಥಿರೀಕರಣಗೊಳಿಸಿದ 5 ಸಾವಿರಕ್ಕೂ ಹೆಚ್ಚು ಕಡತಗಳು ಈತನಕ ವಿಲೇವಾರಿ ಮಾಡಿಲ್ಲ. ಫಲಾನುಭವಿಗಳಿಗೆ ಈತನಕ ಹಕ್ಕುಪತ್ರ ನೀಡಿಲ್ಲ.
ಕಂದಾಯ ಭೂಮಿಯಲ್ಲಿ ಮಂಜೂರಾದ ಭೂ ಸಾಗುವಳಿದಾರರಿಗೆ ಹಕ್ಕುಪತ್ರ ಕೊಡುವ ಕಾರ್ಯದಲ್ಲಿ ಅರಣ್ಯ ಇಲಾಖೆಗೆ ಅಭಿಪ್ರಾಯಕ್ಕಾಗಿ ಕಡತಗಳನ್ನು ಕಳಿಸಲಾಗಿದೆ.

ಅರಣ್ಯ ಇಲಾಖೆ ಅಭಿಪ್ರಾಯ ಕೇಳಬೇಕು ಎನ್ನುವ ಅಗತ್ಯವಿಲ್ಲದಿದ್ದರೂ ಅನಗತ್ಯವಾಗಿ ಅರಣ್ಯ ಇಲಾಖೆಗೆ ಕಳಿಸಿಕೊಡಲಾಗಿದೆ. ಈ ಕಡತಗಳನ್ನು ತಕ್ಷಣ ವಾಪಸ್‌ ತರಿಸಿಕೊಂಡು ಫಲಾನುಭವಿಗಳಿಗೆ ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿದರು. ಎಪಿಎಂಸಿ ಅಧ್ಯಕ್ಷ ಕೆ. ಹೊಳೆಯಪ್ಪ ಮಾತನಾಡಿ, ತಾಲೂಕಿನಲ್ಲಿ ಸುಮಾರು 10 ಸಾವಿರ ಹೆಕ್ಟೇರ್‌ ನಷ್ಟು ತೋಟಗಳಲ್ಲಿ ಅಡಕೆ ಬೆಳೆ ಹಾನಿಯಾಗಿದೆ. 

ಅಡಕೆ ಬೆಳೆಗಾರರಿಗೆ ಸರ್ಕಾರ ತೋಟಗಾರಿಕೆ ಇಲಾಖೆಯ ಮೂಲಕ ಕೊಡುತ್ತಿರುವ ಸಹಾಯಧನವನ್ನು ಇನ್ನಷ್ಟು ಹೆಚ್ಚಿಸಬೇಕು. ಅಡಕೆ ಹಾನಿಗೊಳಗಾದ ಬೆಳೆಗಾರರಿಗೆ ಹೆಚ್ಚಿನ ಪರಿಹಾರ ನೀಡಬೇಕು. ಮುಂದಿನ ಒಂದು ವಾರದಲ್ಲಿ
ಪರಿಹಾರ ನೀಡದೆ ಹೋದಲ್ಲಿ ಉಗ್ರವಾಗದ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Advertisement

ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಕಲಸೆ ಚಂದ್ರಪ್ಪ ಮಾತನಾಡಿದರು. ನಗರ ಬ್ಲಾಕ್‌ ಅಧ್ಯಕ್ಷ ಮಕೂಲ್‌ ಅಹ್ಮದ್‌, ಕಾರ್ಯದರ್ಶಿ ಮಹಾಬಲಕೌತಿ, ಡಿ. ದಿನೇಶ್‌, ಯುವ ಕಾಂಗ್ರೆಸ್‌ ಅಧ್ಯಕ್ಷರಾದ ಸುಧಾಕರ ಕುಗ್ವೆ, ಪ್ರವೀಣ ಬಣಕಾರ್‌, ಎಪಿಎಂಸಿ ಸದಸ್ಯ ರವಿ ಹುಣಾಲಮಡಿಕೆ, ಪ್ರಮುಖರಾದ ಕನ್ನಪ್ಪ ಮುಳಕೇರಿ, ಗುಡ್ಡೆಮನೆ ನಾಗರಾಜ್‌, ಜ್ಯೋತಿ, ಆನಂದ ಭೀಮನೇರಿ, ಅಣ್ಣಪ್ಪ ಸೂರನಗದ್ದೆ, ಷಣ್ಮುಖ, ಲಕ್ಷ್ಮೀಕಾಂತ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next