Advertisement

H.D. Revanna: ನಾನು ಹುಷಾರಾದರೆ ನಿಖಿಲ್‌ ಪರ ಪ್ರಚಾರಕ್ಕೆ ಹೋಗುವೆ

12:44 AM Oct 26, 2024 | Team Udayavani |

ಬೆಂಗಳೂರು: ನನಗೆ ಹುಷಾರಿಲ್ಲ. ಒಂದು ವೇಳೆ ಹುಷಾರಾದರೆ, ನಿಖಿಲ್‌ ಕುಮಾರಸ್ವಾಮಿ ಅವರ ಪರ ಚುನಾವಣ ಪ್ರಚಾರಕ್ಕೆ ಹೋಗುತ್ತೇನೆ ಎಂದು ಮಾಜಿ ಸಚಿವ ಎಚ್‌.ಡಿ. ರೇವಣ್ಣ ತಿಳಿಸಿದರು.

Advertisement

ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಚನ್ನಪಟ್ಟಣಕ್ಕೆ ನಿಖಿಲ್‌ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸುವ ಉದ್ದೇಶ ಇರಲಿಲ್ಲ. ನೂರಕ್ಕೆ ನೂರರಷ್ಟು ನಮ್ಮ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಆಡಳಿತಾರೂಢ ಕಾಂಗ್ರೆಸ್‌ನವರಿಗೆ ಚನ್ನಪಟ್ಟಣದಲ್ಲಿ ಅಭ್ಯರ್ಥಿಯೇ ಇರಲಿಲ್ಲ. ಗೋಗರೆದು ಕರೆದುಕೊಂಡು ಹೋದರು. ನಿಖಿಲ್‌ ಕುಮಾರಸ್ವಾಮಿ ಸ್ಪರ್ಧೆ ಮಾಡದಿದ್ದರೆ, ಓಡಿ ಹೋದ ಅಂತ ಹೇಳುತ್ತಿದ್ದರು. ಕಾಂಗ್ರೆಸ್‌ ಉದ್ದೇಶವೇ ದೇವೇಗೌಡರ ಕುಟುಂಬ ನಾಶ ಮಾಡುವುದಾಗಿದೆ. ಚಕ್ರ ತಿರುಗುತ್ತಿರುತ್ತದೆ. ಕತ್ತಲೆ ಹೋಗುತ್ತದೆ, ಬೆಳಕು ಬರುತ್ತದೆ. ಒಂದೇ ವರ್ಷದಲ್ಲಿ ಗೌಡರ ಕುಟುಂಬ ಮುಗಿದೇ ಹೋಯ್ತು ಅಂದರು. ಅನಂತರ ಏನಾಯ್ತು? ಒಂದೇ ವರ್ಷದಲ್ಲಿ ಕುಮಾರಸ್ವಾಮಿ ಕೇಂದ್ರ ಸಚಿವರಾಗಲಿಲ್ಲವೇ ಎಂದರು.

ಈ ಮಧ್ಯೆ ಹಾಸನದಲ್ಲಿ ಮಾತನಾಡಿದ ಎಂಎಲ್‌ಸಿ ಸೂರಜ್‌ ರೇವಣ್ಣ, ಚನ್ನಪಟ್ಟಣದಲ್ಲಿ ಪ್ರಚಾರ ನಡೆಸುವುದಾಗಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next