Advertisement

ನಾನು ಹೆಸರಿಗಷ್ಟೇ ಸ್ಪೀಕರ್, ಆದರೆ ಮಾತನಾಡುವವರು ಬೇರೆ! ಕಾಗೇರಿ

12:46 PM Nov 07, 2021 | Team Udayavani |

ಶಿರಸಿ: ನಾನು ಹೆಸರಿಗಷ್ಟೇ ಸ್ಪೀಕರ್. ಆದರೆ, ಶಾಸನ ಸಭೆಯಲ್ಲಿ ಮಾತನಾಡಲು ಉಳಿದವರಿಗೆ ಅವಕಾಶ ಮಾಡಿಕೊಡುವ ಕೆಲಸ ಎಂದು ಕರ್ನಾಟಕ ವಿಧಾನ ಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

Advertisement

ಅವರು ಉತ್ತರ ಕನ್ನಡದ ಶಿರಸಿ ಬೆಳ್ಳೇಕೆರಿಯಲ್ಲಿ ರವಿವಾರ ಹಮ್ಮಿಕೊಂಡ ಬೆಳ್ಳೇಕೇರಿ ಹಬ್ಬಕ್ಕೆ ಚಾಲನೆ‌‌ ನೀಡಿ ಮಾತನಾಡಿದರು.

‘ಕರ್ನಾಟಕ ವಿಧಾನ ಸಭೆಯನ್ನು‌ ಅನುಭವ ಮಂಟಪದ ಮಾದರಿಯಲ್ಲಿ ‌ಮಾಡಬೇಕು‌ ಎಂಬ ಕನಸು, ಗುರಿ‌ ಇದೆ. ಆ ನಿಟ್ಟಿನಲ್ಲಿ ಪ್ರಯತ್ನ‌ ನಡೆಸಲಾಗುತ್ತಿದೆ. ಪ್ರತಿ ಊರಿನಲ್ಲಿಯೂ ಇಂಥ ಹಬ್ಬಗಳು‌ ನಡೆದರೆ ಅದು ಗ್ರಾಮಸ್ಥರ ಅನುಭವ ಮಂಟಪ ಆಗಲಿದೆ’ ಎಂದರು.

ಇದನ್ನೂ ಓದಿ: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ: ಸಾವನ್ನಪ್ಪಿದ ಹಿಂಬದಿ ಸವಾರ

Advertisement

ಪ್ರಮುಖರಾದ ಆರ್‌‌.ಎಸ್.ಹೆಗಡೆ, ಎಂ.ಡಿ.ಹೆಗಡೆ, ಆರ್.ವಿ.ಭಾಗವತ್, ಎಂ.ಎನ್.ಹೆಗಡೆ ಬಳಗಂಡಿ,  ಪ್ರಭಾಕರ ತಟ್ಟಿಕೈ, ಜಿ‌. ಆರ್.ಹೆಗಡೆ, ಅಜಿತ್ ಬೆಳ್ಲೇಕೆರಿ ಇತರರು ‌ಇದ್ದರು.

ಈ ವೇಳೆ ಬೆಳ್ಳೇಕೇರಿ ಊರಿನ ವೆಬ್ ಸೈಟ್, ಸ್ಥಳೀಯ ಯುವಕ ಸಂಘದ ವೆಬ್ ಸೈಟ್ ಬಿಡುಗಡೆಗೊಳಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next