Advertisement

ಅನಧಿಕೃತ ನಳ್ಳಿಗಳಿಗೆ ಕಡಿವಾಣ ಯಾವಾಗ? ಪಟ್ಟಣ ಪಂಚಾಯತ್‌ ಆದಾಯಕ್ಕೆ ಬೀಳುತ್ತಿದೆ ಕತ್ತರಿ

06:30 PM Sep 17, 2020 | sudhir |

ನರೇಗಲ್ಲ: ನೀರಿನ ಸಮಸ್ಯೆ ನೀಗಿಸಲು ಪಟ್ಟಣ ಪಂಚಾಯತ್‌ ಅಧಿಕಾರಿಗಳು ಹೈರಾಣಾಗುತ್ತಿರುವ ಹಿನ್ನೆಲೆಯಲ್ಲಿ ಪಟ್ಟಣದ ಜನತೆ ಕೈಚಳಕ ತೋರಿ ಅನಧಿಕೃತ ನಳ ಅಳವಡಿಸಿಕೊಂಡಿದ್ದಾರೆ.

Advertisement

ಪಟ್ಟಣದ 17 ವಾರ್ಡ್‌ಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮ ವಹಿಸಲು ಜಿಲ್ಲಾಡಳಿತ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಪಟ್ಟಣಕ್ಕೆ ಪ್ರತಿದಿನ ನಾಲ್ಕೈದು ತಾಸು ನೀರು ಸರಬರಾಜು ಮಾಡುತ್ತಿದೆ. ಪ.ಪಂ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 17 ಕೊಳವೆ ಬಾವಿಗಳಲ್ಲಿನ ನೀರು ಕೋಡಿಕೊಪ್ಪ, ಮಲ್ಲಾಪುರ, ದ್ಯಾಂಪುರ, ಕೋಚಲಾಪುರ, ತೋಟಗಂಟಿ ಗ್ರಾಮಗಳಿಗೆ ನಿತ್ಯ ನೀರು ಸರಬರಾಜು ಮಾಡಲಾಗುತ್ತಿದೆ. ಪಟ್ಟಣದಲ್ಲಿ ಇನ್ನೂಳಿದ 12 ವಾರ್ಡ್‌ಗಳಿಗೆ ಐದು ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದೆ.

ಪ.ಪಂ ವ್ಯಾಪ್ತಿಯಲ್ಲಿ ಅಧಿಕೃತವಾಗಿ 1,349 ನಳಗಳನ್ನು ಅಳವಡಿಸಲಾಗಿದೆ. ಅನಧಿಕೃತವಾಗಿ 1300ಕ್ಕೂ ಅಧಿಕ ನಳಗಳು ಅಳವಡಿಕೆಯಾಗಿವೆ. ಆದರೂ ಯಾವುದೆ ಕ್ರಮಕೈಗೊಂಡಿಲ್ಲ. ಅನಧಿಕೃತ ನಳಗಳಲ್ಲಿ ಮತ್ತು ಅಧಿಕೃತ ನಳಗಳಿಗೆ ವಿದ್ಯುತ್‌ ಮೋಟರ್‌ ಬಳಕೆಯಿಂದ ಮಧ್ಯಮ ವರ್ಗದವರಿಗೆ ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲ.

ಇದನ್ನೂ ಓದಿ: ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿ ಆರೋಗ್ಯ ಸ್ಥಿತಿ ಗಂಭೀರ

ಪಟ್ಟಣದ ಎಲ್ಲ ವಾರ್ಡ್‌ಗಳಲ್ಲಿರುವ ಮನೆಗಳಿಗೆ ಬಹುತೇಕ ಅನಧಿಕೃತ ನಳಗಳು ಪತ್ತೆಯಾಗಿದ್ದು, ಇವುಗಳಿಗೆ ಕಡಿವಾಣ ಹಾಕಲು ಪ.ಪಂ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಪಪಂ ಆದಾಯಕ್ಕೆ ಕತ್ತರಿ ಬೀಳುತ್ತಿದೆ.

Advertisement

ಕ್ರಮಕ್ಕೆ ಜನರ ಒತ್ತಾಯ
ಅನೇಕರು ಅನಧಿಕೃತ ನಳ ಬಳಕೆ ಮಾಡುವುದರಿಂದ ನಿಯಮಿತವಾಗಿ ಕರ ಪಾವತಿಸುವ ನಮಗೆ ಕಡಿಯುವ ನೀರು ಸರಿಯಾಗಿ ಬರುವುದಿಲ್ಲ. ನೀರು ಬಿಡುವ ಅವಧಿಯಲ್ಲೂ ಕಾಯುತ್ತ ಕುಳಿತುಕೊಳ್ಳುವ ಪರಿಸ್ಥಿತಿ ಬಂದಿದೆ. ಅನಧಿಕೃತ ನಳಗಳಿಂದ ಲಕ್ಷಾಂತರ ಲೀಟರ್‌ ನೀರು ನಷ್ಟವಾಗುತ್ತದೆ. ಕೂಡಲೇ ಪ.ಪಂ ಅಧಿಕಾರಿಗಳು ಅನಧಿಕೃತ ಹಾಗೂ ವಿದ್ಯುತ್‌ ಮೋಟರ್‌ ಬಳಕೆ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಎಂದು ಪಟ್ಟಣದ ಪ್ರಜ್ಞಾವಂತ ನಾಗರಿಕರು ಒತ್ತಾಯಿಸಿದ್ದಾರೆ.

ಪಟ್ಟಣ ಸೇರಿದಂತೆ ಮಜರೆ ಗ್ರಾಮಗಳಲ್ಲಿ ಅನಧಿಕೃತ ನಳ ಸಂಪರ್ಕ ಹೊಂದಿರುವವರಿಗೆ ಈಗಾಗಲೇ ಪಪಂ ವತಿಯಿಂದ ನೋಟಿಸ್‌ ನೀಡಲಾಗುತ್ತಿದೆ. ಅವರಲ್ಲಿ ಈಗಾಗಲೇ ಕೆಲವರು ಬಂದು ಹಣ ಪಾವತಿಸಿ ಅಧಿಕೃತಪಡಿಸಿಕೊಳ್ಳುತ್ತಿದ್ದಾರೆ. ನೋಟಿಸ್‌ ನೀಡಿದ ಏಳು ದಿನದ ಒಳಗಾಗಿ ಅನಧಿಕೃತವಿರುವ ನಳಗಳನ್ನು ಅಧಿಕೃತ ಪಡಿಸಿಕೊಳ್ಳದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು.
– ಎಂ.ಎ. ನೂರುಲ್ಲಾಖಾನ್‌, ಪಪಂ ಪ್ರಭಾರಿ ಮುಖ್ಯಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next