Advertisement

ಕಸಾಯಿಖಾನೆಯಲ್ಲಿ ಅಕ್ರಮ

11:35 AM Mar 24, 2017 | Team Udayavani |

ಬೆಂಗಳೂರು: ಹಾರೋಹಳ್ಳಿಯಲ್ಲಿ ಕಾಸಾಯಿಖಾನೆ ನಿರ್ಮಿಸುವ ಒಪ್ಪಂದವನ್ನು ಬಿಬಿಎಂಪಿ ಕಾನೂನು ಬಾಹಿರವಾಗಿ ಖಾಸಗಿ ಸಂಸ್ಥೆಯೊಂದಿಗೆ ಮಾಡಿಕೊಂಡಿದೆ ಎಂದು ಪಾಲಿಕೆ ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ ಆರೋಪಿಸಿದ್ದಾರೆ. 

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಕಾಸಾಯಿಖಾನೆ ನಿರ್ಮಾಣಕ್ಕೆ ಪಾಲಿಕೆ ಟೆಂಡರ್‌ ಆಹ್ವಾನಿಸಿ ಚೆನ್ನೈ ಅಬಾಟಿಯರ್‌ ಮತ್ತು ಸಗ್‌ ಇನಾಸ್ಟ್ರಕ್ಚರ್‌ ಕಂಪನಿಗೆ ವಹಿಸಿತ್ತು. ಆನಂತರದಲ್ಲಿ ಸಗ್‌ ಸಂಸ್ಥೆ ಪಾಲಿದಾರಿಕೆಯಿಂದ ಹೊರನಡೆದಿತ್ತು. ಈ ವೇಳೆ ಅಬಾಟಿಯರ್‌ ಸಂಸ್ಥೆ ಕ್ಯಾಪ್ರಿಮೀಟ್‌ ಎಂಬ ಹೆಸರಿ ನೊಂದಿಗೆ ನಿರ್ವಹಣೆ ಗುತ್ತಿಗೆಯನ್ನು ಪಡೆದಿದ್ದು, ಪಾಲಿಕೆಯ ಅಧಿಕಾರಿಗಳು ಕಾನೂನು ಬಾಹಿರವಾಗಿ ಅವರಿಗೆ ಐದು ಕೋಟಿ ರೂ. ಬಿಡುಗಡೆ ಮಾಡಿದ್ದಾರೆ,” ಎಂದು ದೂರಿದರು. 

ಕಸಾಯಿಖಾನೆ ನಿರ್ವಹಣೆಗೆ 28.40 ಕೋಟಿ ರೂ.ಗಳನ್ನು ನೀಡಬೇಕೆಂದು ಕೋರಿದ್ದ ಕಂಪನಿ ನಂತರದಲ್ಲಿ ನಡೆದ ಸಂಧಾನ ಪ್ರಕ್ರಿಯೆಯಲ್ಲಿ ವಾರ್ಷಿಕ 14.25 ಕೋಟಿ ರೂ.ಗಳಿಗೆ ಒಪ್ಪಿತ್ತು. ಆದರೆ, 19.80 ಕೋಟಿ ರೂ. ನೀಡಿರುವುದು ಅನುಮಾನಗಳಿಗೆ ಕಾರಣವಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next