Advertisement

ಅನಧಿಕೃತ ಗಣಿಗಾರಿಕೆ ಖಂಡಿಸಿ ಪ್ರತಿಭಟನೆ

06:40 AM Aug 18, 2017 | Team Udayavani |

ಹೆಬ್ರಿ: ಕಾರ್ಕಳ ತಾಲೂಕಿನ ಚಾರ ಗ್ರಾ.ಪಂ. ವ್ಯಾಪ್ತಿಯ ಹುತ್ತುರ್ಕೆಯಲ್ಲಿ ಅನಧಿಕೃತವಾಗಿ ಗಣಿಗಾರಿಕೆ  ನಡೆಯುತ್ತಿದೆ ಎಂಬುದನ್ನು ಖಂಡಿಸಿ ಆ. 17ರಂದು  ಚಾರ ಗ್ರಾಮಸ್ಥರು ಹಾಗೂ ಬಿಜೆಪಿಯಿಂದ ಪ್ರತಿಭಟನೆ ನಡೆಸಿದರು.

Advertisement

ಹಲವಾರು ಸಮಯಗಳಿಂದ ನಡೆ ಯುತ್ತಿರುವ ಅಕ್ರಮ ಗಣಿಗಾರಿಕೆ ವಿರುದ್ಧ ಪಂಚಾಯತ್‌ಗೆ ದೂರು ನೀಡಿ ಅಧಿಕಾರಿಗಳು  ರೈಡ್‌ ಮಾಡಿದರು ಕೂಡ ಯಾವುದೇ ಭಯವಿಲ್ಲದೆ ಗಣಿಗಾರಿಕೆಯನ್ನು ನಡೆಸುತ್ತಿದ್ದಾರೆ. ಈ ಬಗ್ಗೆ ಇಲಾಖೆ ಇನ್ನಾ ದರೂ ಶೀಘ್ರವಾಗಿ ಕ್ರಮ ಕೈಗೊಳ್ಳಲಿ ಎಂದು ಪ್ರತಿಭಟನೆಯ ಪ್ರಮುಖರಲ್ಲಿ ಓರ್ವರಾದ ಡಿ.ಜಿ. ರಾಘವೇಂದ್ರ ಹೇಳಿದರು. ಅನಧಿಕೃತವಾಗಿ ಅಕ್ರಮ ಗಣಿಗಾರಿಕೆಯನ್ನು ಒಬ್ಬ ಗ್ರಾಮ ಪಂಚಾಯತ್‌ ಸದಸ್ಯನಾಗಿ ನಡೆಸುತ್ತಿರುವುದು ಅತ್ಯಂತ ಖೇದಕರ ಸಂಗತಿ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ ಪ್ರಸನ್ನ ಶೆಟ್ಟಿ ಹೇಳಿದರು. ಕೂಡಲೇ ಕ್ರಮವನ್ನು ಕೈಗೊಳ್ಳದಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಮಿಥುನ್‌ ಶೆಟ್ಟಿ ಹೇಳಿದರು.

ಅಕ್ರಮ ಗಣಿಗಾರಿಕೆ ತನಿಖೆಗೆ ಆಗ್ರಹ: ಕಾರ್ಕಳ ತಾಲೂಕಿನ ಚಾರ ಗ್ರಾ.ಪಂ. ವ್ಯಾಪ್ತಿಯ ಹುತ್ತುರ್ಕೆ ಸರ್ವೆ ನಂಬರ್‌ 105ರಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವುದರ ಬಗ್ಗೆ ಪಂಚಾಯತ್‌ ಹಾಗೂ ಕಂದಾಯ ಅಧಿಕಾರಿಗಳ ಗಮನಕ್ಕೆ  ಬಂದಿದ್ದು ಸ್ಥಳಕ್ಕೆ ಬೇಟಿ ನೀಡಿ ನಿಲುಗಡೆಗೆ ಆದೇಶ ನೀಡಿದ್ದರೂ ಯಾವುದೇ ಮುಲಾಜಿಲ್ಲದೆ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿರುವ ದಿನೇಶ್‌ ಶೆಟ್ಟಿ ವಿರುದ್ಧ ಪಂ. ಹಾಗೂ ಕಂದಾಯ ಅಧಿಕಾರಿಗಳು ಯಾವುದೇ  ಕ್ರಮ ಕೈಗೊಳ್ಳದಿರುವ ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿ ಚಾರ ಪಂಚಾಯತ್‌ನ ಗ್ರಾಮಕರಣಿಕರಿಗೆ ಮನವಿಯನ್ನು ನೀಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next