Advertisement

Bihar: ಅಕ್ರಮ ಗಣಿಗಾರಿಕೆ: ಬಿಹಾರ ಎಂಎಲ್‌ಸಿ ಆಸ್ತಿ ಮುಟ್ಟುಗೋಲು

09:47 PM Feb 06, 2024 | Team Udayavani |

ನವದೆಹಲಿ: ಬಿಹಾರದ ಜೆಡಿಯು ನಾಯಕ, ಎಂಎಲ್‌ಸಿ ರಾಧಾಚರಣ್‌ ಸಹಾಗೆ ಸೇರಿದ 26 ಕೋಟಿ ರೂ. ಮೌಲ್ಯ 2 ಆಸ್ತಿಯನ್ನು ಇ.ಡಿ. ಮುಟ್ಟುಗೋಲು ಹಾಕಿಕೊಂಡಿದೆ. ಅಕ್ರಮ ಮರಳು ಗಣಿಗಾರಿಕೆ ಪ್ರಕರಣದಲ್ಲಿ ಅಕ್ರವಾಗಿ ಹಣ ವರ್ಗಾವಣೆ ಮಾಡಿದ ಆರೋಪವನ್ನು ಅವರು ಎದುರಿಸುತ್ತಿದ್ದಾರೆ.

Advertisement

ಅಕ್ರಮ ಮರಳು ಗಣಿಗಾರಿಕೆಯನ್ನು ಜಾಲದಲ್ಲಿ ರಾಧಾಚರಣ್‌ ಸಹಾ ಸದಸ್ಯರಾಗಿದ್ದರು ಎಂದು ಇ.ಡಿ.ಆರೋಪಿಸುತ್ತಿತ್ತು. ಹವಾಲಾ ಜಾಲದ ಮೂಲಕ ಇವರ ಪುತ್ರ ಕನ್ಹಯ್ಯ ಪ್ರಸಾದ್‌ ಅಕ್ರಮ ಹಣ ವರ್ಗಾವಣೆಯಲ್ಲಿ ತೊಡಗಿದ್ದ ಎಂದು ಇ.ಡಿ. ತನಿಖೆಯಿಂದ ಗೊತ್ತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next