Advertisement

Illegal liquor ದಾಸ್ತಾನು ಪ್ರಕರಣ: 1 ವರ್ಷ ಜೈಲು; 10 ಸಾವಿರ ರೂ. ದಂಡ

12:20 AM Feb 24, 2024 | Team Udayavani |

ಉಡುಪಿ: ಅಕ್ರಮವಾಗಿ ಸಾರಾಯಿ ವಶದಲ್ಲಿಟ್ಟುಕೊಂಡ ಆರೋಪಿ ಮಂಜುನಾಥ್‌ ಕುಂದರ್‌ಗೆ 1 ವರ್ಷ ಕಠಿನ ಸಜೆ ಮತ್ತು 10 ಸಾವಿರ ರೂ. ದಂಡ, ದಂಡ ಪಾವತಿಸಲು ತಪ್ಪಿದಲ್ಲಿ 2 ತಿಂಗಳ ಸಾಧಾರಣ ಶಿಕ್ಷೆ ವಿಧಿಸಿ ನ್ಯಾಯಾಧೀಶರಾದ ದೀಪಾ ಫೆ. 23ರಂದು ಆದೇಶಿಸಿದ್ದಾರೆ.

Advertisement

ಮಂಜುನಾಥ್‌ 2020ರಲ್ಲಿ ಬೈರಂಪಳ್ಳಿ ಗ್ರಾಮದ ಕುಂತಾಲುಕಟ್ಟೆಯ ಶೆಡ್‌ನ‌ಲ್ಲಿ ಅಕ್ರಮವಾಗಿ ಮದ್ಯ ದಾಸ್ತಾನು ಮಾಡಿರುವುದನ್ನು ಅಬಕಾರಿ ಉಪನಿರೀಕ್ಷಕ ಶಿವಶಂಕರ್‌ ಯು. ಪತ್ತೆ ಹಚ್ಚಿ ಪ್ರಕರಣ ದಾಖಲಿಸಿದ್ದರು.

ಅಬಕಾರಿ ನಿರೀಕ್ಷಕರಾದ ಜ್ಯೋತಿ ಎನ್‌. ತನಿಖೆ ನಡೆಸಿ ದೋಷಾರೋಪಣ ಪತ್ರ ಸಲ್ಲಿಸಿದ್ದರು. ಪ್ರಕರಣವು ಉಡುಪಿಯ ಪ್ರಧಾನ ಸಿಜೆ ಮತ್ತು ಜೆಎಂಎಫ್ಸಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next