Advertisement

Davanagere: ಕಾಳಸಂತೆಯಲ್ಲಿ ಮಾರಾಟ ಮಾಡಲು ಅಕ್ರಮವಾಗಿ ರಾಗಿ ಸಂಗ್ರಹ; ಓರ್ವ ಬಂಧನ

06:19 PM Jul 24, 2024 | Team Udayavani |

ದಾವಣಗೆರೆ: ಕಾಳಸಂತೆಯಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ಸಂಗ್ರಹಿಸಿದ್ದ 18,400 ರೂಪಾಯಿ ಮೌಲ್ಯದ ಪಡಿತರ ರಾಗಿಯನ್ನು ಹರಿಹರ ನಗರ ಠಾಣೆ ಪೊಲೀಸರು ವಶ ಪಡಿಸಿಕೊಂಡಿದ್ದಾರೆ.

Advertisement

ಹರಿಹರದ ಸ್ಟಾರ್ ಟ್ರೇರ‍್ಸ್  ಮಾಲಿಕ ಸಯ್ಯದ್ ತಾಜುದ್ದೀನ್ ಬಂಧಿತ.

ಹರಿಹರ ನಗರದ ಗೌಸಿಯಾ ಕಾಲೋನಿಯಲ್ಲಿ ಸುರೇಶ್ ಎಂಬುವರ ಹಂಚಿನ ಮನೆಯನ್ನು ಬಾಡಿಗೆ ಪಡೆದುಕೊಂಡು ಸಾರ್ವಜನಿಕ ವಿತರಣೆ ಪದ್ದತಿಯಲ್ಲಿ ವಿತರಣೆ ಮಾಡುವ ರಾಗಿ ಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ಸಂಗ್ರಹಣೆ ಮಾಡಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಹರಿಹರ ನಗರ ಪೊಲೀಸ್ ಅಧಿಕಾರಿ ಸಿಬ್ಬಂದಿಗಳ ತಂಡ ಹಾಗೂ ಆಹಾರ ನಿರೀಕ್ಷಕ ಎಂ. ನಜರುಲ್ಲಾ ಇತರರು ದಾಳಿ ನಡೆಸಿ ಒಟ್ಟು 920 ಕೆಜಿ ರಾಗಿ ( ಬೆಲೆ 18,400) ವಶಪಡಿಸಿಕೊಂಡಿದ್ದಾರೆ.

ಕಾಳಸಂತೆಯಲ್ಲಿ ಮಾರಾಟ ಮಾಡುವ ಸಲುವಾಗಿ ಸಂಗ್ರಹಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದರಿಂದ  ದಾಸ್ತಾನನ್ನು ಅಕ್ರಮ ದಾಸ್ತಾನು ಎಂದು ಪರಿಗಣಿಸಿ ಸಯ್ಯದ್ ತಾಜುದ್ದೀನ್ ವಿರುದ್ದ ಆಹಾರ ನಿರೀಕ್ಷಕರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next