Advertisement

ಪ್ರಜ್ವಲ್‌ ಎಲ್ಲಿದ್ದಾನೆ ಎಂದು ಗೊತ್ತಿದ್ದರೆ ಹೇಳಿ: ಡಾ| ಜಿ. ಪರಮೇಶ್ವರ್‌

10:55 PM May 15, 2024 | Team Udayavani |

ಬೆಂಗಳೂರು: ಪ್ರಜ್ವಲ್‌ ಎಲ್ಲಿದ್ದಾನೆ ಅಂತ ನಮಗೆ ಗೊತ್ತಿಲ್ಲ. ನಿಮಗೇನಾದರೂ ಮಾಹಿತಿ ಇದೆಯೇ? ಗೊತ್ತಿದ್ದರೆ ಹೇಳಿ, ನಮಗೂ ಸಹಾಯ ಆಗುತ್ತದೆ.ಸಂಸದ ಪ್ರಜ್ವಲ್‌ ರೇವಣ್ಣ ನಾಪತ್ತೆ ಬಗ್ಗೆ ಸ್ವತಃ ಗೃಹ ಸಚಿವ ಡಾ| ಜಿ. ಪರಮೇಶ್ವರ್‌ ಅವರು ಅಲವತ್ತುಕೊಂಡ ರೀತಿ ಇದು.

Advertisement

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಜ್ವಲ್‌ ಎಲ್ಲಿದ್ದಾನೆ ಎಂಬುದು ಎಸ್‌ಐಟಿಗೆ ಗೊತ್ತಿದೆ. ನಮಗೆ ಗೊತ್ತಿಲ್ಲ. ನಿಮಗೇನಾದರೂ ಮಾಹಿತಿ ಇದೆಯಾ? ಪ್ರಜ್ವಲ್‌ ಎಲ್ಲಿದ್ದಾನೆಂದು ನಿಮಗೇನಾದ್ರೂ ಗೊತ್ತಾ? ಗೊತ್ತಿದ್ದರೆ ನೀವೇ ಹೇಳಿ, ನಮಗೂ ಸಹಾಯ ಆಗುತ್ತದೆ ಎಂದರು. ಬುಧವಾರ ನಡೆದ ಸಭೆಯಲ್ಲಿ ಸಿಎಂ ನನಗೆ ಕೆಲವು ಸೂಚನೆ ನೀಡಿದ್ದಾರೆ. ಅವುಗಳನ್ನು ಬಹಿರಂಗಪಡಿಸುವಂತಿಲ್ಲ ಎಂದರು.

ಸತೀಶ್‌ ಜಾರಕಿಹೊಳಿ ಅವರ ಮನೆಗೆ ಹೋಗಿದ್ದೆ . ಅವರ ಮಗಳು ಚುನಾವಣೆಗೆ ಸ್ಪರ್ಧಿಸಿದ್ದರು. ಅದರ ಬಗ್ಗೆ ಚರ್ಚೆ ಮಾಡಿ ಬಂದಿದ್ದೆ . ಸಮುದಾಯವಾರು ಡಿಸಿಎಂ ಬಗ್ಗೆ ಚರ್ಚೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು. ತಿಮಿಂಗಿಲ ಯಾರು ಅಂತ ಕುಮಾರಸ್ವಾಮಿಗೆ ಗೊತ್ತಿದೆ. ಹೀಗೆ ಗೊತ್ತಿದ್ದು ಹೇಳದೆ ಇರುವುದು ತಪ್ಪು ಅಲ್ಲವೇ? ತಿಮಿಂಗಿಲ ಯಾರು ಅಂತ ಹೇಳಿಬಿಡಲಿ, ಅಲ್ಲಿಗೆ ಎಲ್ಲವೂ ಮುಗಿದು ಹೋಗುತ್ತದೆ ಎಂದಷ್ಟೇ ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next