Advertisement

ಯುದ್ಧ ಹೇರಿದರೆ ನಮಗೇ ನಿರ್ಣಾಯಕ ಜಯ: ಪಾಕಿಗೆ ಜ|ರಾವತ್‌

09:33 AM Jan 16, 2019 | Team Udayavani |

ಹೊಸದಿಲ್ಲಿ : ‘ನಮ್ಮ ಪಶ್ಚಿಮದ ನೆರೆ ರಾಷ್ಟ್ರ ನಿರಂತರವಾಗಿ ಭಯೋತ್ಪಾದಕರನ್ನು ಬೆಂಬಲಿಸುತ್ತಿದೆ. ಒಂದೊಮ್ಮೆ ನಮ್ಮ ಮೇಲೆ ಯುದ್ಧ ಹೇರಲ್ಪಟ್ಟರೆ ನಾವು ನಿರ್ಣಾಯಕ ವಿಜಯ ಗಳಿಸುತ್ತೇವೆ’ ಎಂಬ ಖಡಕ್‌ ಎಚ್ಚರಿಕೆಯನ್ನು, ಭಾರತದ ಸೇನಾ ಮುಖ್ಯಸ್ಥ ಜನರಲ್‌ ಬಿಪಿನ್‌ರಾವತ್‌ ಅವರು ಪಾಕಿಸ್ಥಾನವನ್ನು ನೇರವಾಗಿ ಹೆಸರಿಸದೆ, ರವಾನಿಸಿದ್ದಾರೆ. 

Advertisement

77ನೇ ಸೇನಾ ಪರೇಡ್‌ ನಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಅವರು ‘ಭವಿಷ್ಯದಲ್ಲಿನ ದೇಶದ ಭದ್ರತಾ ಸವಾಲುಗಳು ಸಂಕೀರ್ಣವಾಗಿರುತ್ತದೆ; ಆದುದರಿಂದ ನಾವು ಯಾವುದೇ ರೀತಿಯ ಅಪಾಯಗಳನ್ನು ಸಮರ್ಥವಾಗಿ ಎದುರಿಸಲು ವೃತ್ತಿಪರ ಕೌಶಲಗಳನ್ನು ಹೆಚ್ಚಿಸಿಕೊಳ್ಳಬೇಕಾದ ಅಗತ್ಯವಿದೆ’ ಎಂದು ಜನರಲ್‌ ರಾವತ್‌ ಹೇಳಿದರು. 

‘ಚೀನದೊಂದಿಗಿನ ಗಡಿಯಲ್ಲಿ ಭಾರತೀಯ ಸೇನೆ ಹೊಸ ನೀತಿಯನ್ನು ಕೈಗತ್ತಿಕೊಂಡಿದೆ ; ಉಭಯ ದೇಶಗಳ ಸೇನೆಗಳು ಶಾಂತಿ ಕಾಪಿಡಲು ಶ್ರಮಿಸಬೇಕಿದೆ’ ಎಂದು ಜನರಲ್‌ ರಾವತ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next