Advertisement

Priyank Kharge: ಅಕ್ರಮ ನಡೆದಿದ್ದರೆ ಮೋದಿ, ಶಾ ನಮ್ಮನ್ನು ಸುಮ್ಮನೆ ಬಿಡುತ್ತಿದ್ದರಾ

12:31 AM Oct 15, 2024 | Team Udayavani |

ಬೆಂಗಳೂರು: ಸಿದ್ಧಾರ್ಥ ವಿಹಾರ ಟ್ರಸ್ಟ್‌ ಖಾಸಗಿ ಅಲ್ಲ, ಸಾರ್ವಜನಿಕ ಟ್ರಸ್ಟ್‌. ಅಲ್ಲಿಗೆ ಬಂದ ಹಣ ದುರುಪಯೋಗ ಆಗುವುದಿಲ್ಲ. ಲಾಭದ ಉದ್ದೇಶ ಅಲ್ಲಿಲ್ಲ. ತರಬೇತಿ ಕೊಡುವುದೇ ಮೂಲ ಉದ್ದೇಶ ಎಂದು ಪಂಚಾಯತ್‌ ರಾಜ್‌ ಮತ್ತು ಗ್ರಾಮೀಣಾ
ಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.

Advertisement

5 ಎಕರೆ ನಿವೇಶನ ಮರಳಿಸುವುದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ರಾಜಕೀಯ ಪ್ರೇರಿತ ಆರೋಪದಿಂದ ಬೇಸರವಾಗಿ ನಿವೇಶನ ಮರಳಿಸಿದ್ದಾರೆ. ಅಲ್ಲಿ ಅಕ್ರಮ ನಡೆದಿದ್ದರೆ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್‌ ಶಾ ನಮ್ಮನ್ನು ಸುಮ್ಮನೆ ಬಿಡುತ್ತಿದ್ದರಾ? ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಂತೂ ಕಲಬುರಗಿಗೆ ಪಾದಯಾತ್ರೆ ಮಾಡಿಬಿಡುತ್ತಿದ್ದರು ಎಂದರು.

ರಾಷ್ಟ್ರದ ಆರ್ಥಿಕ ವ್ಯವಸ್ಥೆ ಕರ್ನಾಟಕದ ಮೇಲೆ ನಿಂತಿದ್ದರೂ ರಾಜ್ಯಕ್ಕೆ ಕೇಂದ್ರ ಸರಕಾರದಿಂದ ಸಿಗುತ್ತಿರುವ ತೆರಿಗೆ ಪಾಲಿನಲ್ಲಿ ಮಾತ್ರ ಅನ್ಯಾಯ ಆಗುತ್ತಲೇ ಇದೆ. ಇದನ್ನು ಬಿಜೆಪಿಯವರು ಪ್ರಧಾನಿ ಮೋದಿ ಎದುರು ಟೇಬಲ್‌ ಕುಟ್ಟಿ ಪ್ರಶ್ನಿಸಿ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next