Advertisement

Priyank: ಸೋಮಣ್ಣ,ರವಿ ದೇಶದ್ರೋಹಿಗಳಾ: ಅವರ ವಿರುದ್ಧದ ಪ್ರಕರಣವನ್ನೂ ವಾಪಸ್‌ ಪಡೆದಿದ್ದೇವೆ

11:57 PM Oct 14, 2024 | Team Udayavani |

ಬೆಂಗಳೂರು: ಕೇಂದ್ರ ಸಚಿವ ವಿ. ಸೋಮಣ್ಣ, ವಿಧಾನಪರಿಷತ್‌ ಸದಸ್ಯ ಸಿ.ಟಿ. ರವಿ, ಬಿಜೆಪಿ ಮುಖಂಡ ಸುಕುಮಾರ ಶೆಟ್ಟಿ ಸೇರಿದಂತೆ ಹಲವರ ವಿರುದ್ಧ ಇದ್ದ ಪ್ರಕರಣಗಳನ್ನೂ ಹಿಂಪಡೆದಿದ್ದೇವೆ. ಹಾಗಿದ್ದರೆ ಇವರೆಲ್ಲ ದೇಶದ್ರೋಹಿಗಳಾ? ಭಯೋತ್ಪಾದಕರಾ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಪ್ರಶ್ನಿಸಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ಉಪಸಮಿತಿಯ ಶಿಫಾರಸಿನಂತೆ 60 ಪ್ರಕರಣಗಳ ಪೈಕಿ 43 ಪ್ರಕರಣಗಳನ್ನು ಹಿಂಪಡೆದಿದ್ದೇವೆ. ಇವುಗಳಲ್ಲಿ ಕೇಂದ್ರದಲ್ಲಿ ಸಚಿವರಾಗಿರುವ ವಿ. ಸೋಮಣ್ಣ ವಿರುದ್ಧದ ನಾಲ್ಕೈದು ಪ್ರಕರಣಗಳೂ ಸೇರಿವೆ. ಸಿ.ಟಿ. ರವಿ, ಸುಕುಮಾರ ಶೆಟ್ಟಿ, ಮೈಸೂರು ಬಿಜೆಪಿ ಮಹಿಳಾ ಮೋರ್ಚಾ ಪದಾಧಿಕಾರಿ ಸೇರಿದಂತೆ ಬಿಜೆಪಿ ಮುಖಂಡರ ವಿರುದ್ಧದ ಪ್ರಕರಣಗಳೂ ಇವೆ ಎಂದರು.

ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ 100ಕ್ಕೂ ಹೆಚ್ಚು ಪ್ರಕರಣಗಳನ್ನು ಹಿಂಪಡೆದಿದ್ದಾರೆ. ಇದರಲ್ಲಿ ತಪ್ಪೇನಿದೆ? ಸೋಮಣ್ಣ, ಸಿ.ಟಿ. ರವಿ ಎಲ್ಲ ದೇಶದ್ರೋಹಿಗಳಾ? ಭಯೋತ್ಪಾದಕರಾ? ವಿಪಕ್ಷದ ನಾಯಕ ಆರ್‌. ಅಶೋಕ್‌ ತೂಕವಾಗಿ ಮಾತನಾಡಿದರೆ ಪ್ರತಿಕ್ರಿಯಿಸಬಹುದು. ಯಾವುದೇ ವಿಷಯವಿಲ್ಲದೆ ಸುಮ್ಮನೆ ಹಿಟ್‌ ಅಂಡ್‌ ರನ್‌ ಪ್ರಕರಣಗಳನ್ನೇ ಪ್ರಸ್ತಾವಿಸುತ್ತಿದ್ದಾರೆ. ಅವರವರ ಒಳಜಗಳ ಮುಚ್ಚಿಕೊಳ್ಳಲು ಇಂತಹ ಕೆಲಸ ಮಾಡುತ್ತಿದ್ದಾರೆ. ಅವರು ಯಾವುದಾದರೂ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದಿದ್ದಾರೆಯೇ? ಎಂದು ಪ್ರಶ್ನೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next