Advertisement

ಅರಣ್ಯ ರಕ್ಷಿಸದಿದ್ದರೆ ಭವಿಷ್ಯವಿಲ್ಲ: ಸಚಿವ

06:40 AM Jun 14, 2020 | Lakshmi GovindaRaj |

ಗುಬ್ಬಿ: ಗಿಡಗಳನ್ನು ಬೆಳೆಸದೇ ಹಾಗೂ ಅರಣ್ಯಗಳನ್ನು ಸಂರಕ್ಷಿಸದೆ ಹೋದರೆ ಮುಂದಿನ ಭವಿಷ್ಯವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು. ತಾಲೂಕಿನ ಕಡಬ ಹೋಬಳಿಯ ಮಾರಶೆಟ್ಟಿಹಳ್ಳಿ ಅರಣ್ಯ  ವಲಯದಲ್ಲಿ ಶ್ರೀ ಗಂಧದ ಪ್ಲಾಂಟೆಷನ್‌ ವೀಕ್ಷಣೆ ಮತ್ತು ವನಮಹೋ ತ್ಸವ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ಮಾತನಾಡಿದರು.

Advertisement

ವರ್ಷ ದಿಂದ ವರ್ಷಕ್ಕೆ ಅಂತರ್ಜಲದ ಮಟ್ಟ ಕುಸಿತ ಕಾಣುತ್ತಿದ್ದು, ರಾಜ್ಯದ 41 ಜಿಲ್ಲೆಗಳಲ್ಲಿ ಅಂತರ್ಜಲ  ಕ್ಷೀಣಿಸಿದೆ. ನಮ್ಮ ಜಿಲ್ಲೆಯಲ್ಲಿಯೇ 6 ತಾಲೂಕುಗಳು ಸಂಪೂರ್ಣ ಅಂತರ್ಜಲ ಕಳೆದು ಕೊಂಡಿದೆ ಎಂದರು. ಕೇಂದ್ರ ಸರ್ಕಾರದಿಂದ 1,230 ಕೋಟಿಯಲ್ಲಿ ಅಂತರ್ಜಲ ಅಭಿವೃದಿಟಛಿ ಮಾಡಲು ನಾನಾ ಯೋಜನೆ ಮಾಡಲಾಗುತ್ತಿದೆ. ಅಂತರ್ಜಲ  ಹೆಚ್ಚಾಗಬೇಕಾದರೆ ಮರಗಿಡಗಳನ್ನು ಬೆಳೆಸುವು ದರ ಮೂಲಕ ಅರಣ್ಯಗಳನ್ನು ಹೆಚ್ಚು ಸಂರಕ್ಷಣೆ ಮಾಡಬೇಕು ಎಂದು ತಿಳಿಸಿದರು.

ಕೊಬ್ಬರಿ ಬೆಲೆಯನ್ನು ನಫೆಡ್‌ ಮೂಲಕ ಖರೀದಿ ಮಾಡಿ 10,300 ರೂ. ಗಳ ದರ ನಿಗದಿ ಮಾಡಲಾಗುತ್ತಿದೆ.  ಸರ್ಕಾರದಿಂದ 2 ಲಕ್ಷ ಮೆಟ್ರಿಕ್‌ ಟನ್‌ ಕೊಬ್ಬರಿ ಕೊಂಡುಕೊಳ್ಳಲು ಯೋಜನೆ ಮಾಡಲಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಉತ್ತರ ಭಾರತಕ್ಕೆ ಕೊಬ್ಬರಿ ಹೋಗುತ್ತಿಲ್ಲ ಹಾಗಾಗಿ ದಿನದಿಂದ ದಿನಕ್ಕೆ ಕೊಬ್ಬರಿ ಬೇಡಿಕೆ ಕಡಿಮೆಯಾಗಿದ್ದು, ದರ  ಕಡಿಮೆಯಾಗಿದೆ ಎಂದರು. ಅರಣ್ಯ ಇಲಾಖೆ ಮಾತ್ರ ಕಾಡು ಬೆಳೆಸಬೇಕು ಎಂದರೆ ಅದು ಸಾಧ್ಯವಿಲ್ಲ.

ಇಲಾಖೆಯಿಂದ ಹಲವು ಜಾತಿಯ ಸಸಿಗಳನ್ನು ಪಡೆದುಕೊಂಡು ರೈತರು ತಮ್ಮ ಜಮೀನಿನ ಬದುಗಳಲ್ಲಿ ಖಾಲಿ ಜಾಗಗಳಲ್ಲಿ ಮರಗಳನ್ನು  ಬೆಳೆಸಬೇಕು ಎಂದು ತಿಳಿಸಿದರು. ಜಿಲ್ಲಾ ಅರಣ್ಯಾಧಿಕಾರಿ ಗಿರೀಶ್‌, ನಾಗರಾಜು, ಎಸಿಎಫ್‌ ಸಂತೋಷ್‌ ನಾಯಕ್‌, ಸುರೇಂದ್ರ, ಸಾಮಾ ಜಿಕ ವಲಯ ಅರ ಣ್ಯಾಧಿಕಾರಿ ಜಿತೇಂದ್ರ, ತಾ.ವಲಯ ಅರಣ್ಯಾಧಿಕಾರಿ ಸಿ.ರವಿ, ಶಂಕರ್‌, ಕುತುಬುದ್ದೀನ್‌,  ಶಂಕರ್‌, ಶ್ರೀಧರ್‌, ಬಿಜೆಪಿ ಮು ಖಂಡ ಎಸ್‌.ಡಿ. ದೀಲಿಪ್‌ ಕುಮಾರ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next