Advertisement

ಭಯೋತ್ಪಾದನೆ ಸಮಸ್ಯೆ ಅಲ್ಲ ಎಂದ ಮೇಲೆ ರಾಹುಲ್ ಗೆ SPG ಭದ್ರತೆ ಯಾಕೆ?

09:12 AM Apr 07, 2019 | Team Udayavani |

ಹೈದರಾಬಾದ್: ಭಯೋತ್ಪಾದನೆಯೊಂದು ಸಮಸ್ಯೆ ಅಲ್ಲ ಎಂದಾದ ಮೇಲೆ ನಿಮಗೆ (ರಾಹುಲ್ ಗಾಂಧಿ) ನೀಡಿರುವ ಎಸ್ ಪಿಜಿ ಭದ್ರತೆಯನ್ನು ವಾಪಸ್ ಪಡೆಯುವಂತೆ ಕೇಂದ್ರಕ್ಕೆ ಪತ್ರ ಬರೆಯಿರಿ ಎಂದು ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ತಿರುಗೇಟು ನೀಡಿದ್ದಾರೆ.

Advertisement

ದೇಶದಲ್ಲಿ ಭಯೋತ್ಪಾದನೆ ದೊಡ್ಡ ಸಮಸ್ಯೆ ಅಲ್ಲ ಎಂದು ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಸುಷ್ಮಾ ಸ್ವರಾಜ್, ರಾಹುಲ್ ಹೇಳುತ್ತಾರೆ ಭಯೋತ್ಪಾದನೆ ಸಮಸ್ಯೆ ಅಲ್ಲ ಉದ್ಯೋಗ ದೊಡ್ಡ ಸಮಸ್ಯೆಯಾಗಿದೆಯಂತೆ. ರಾಹುಲ್ ಗಾಂಧೀಜಿ ನಾನು ನಿಮಗೆ ಹೇಳುತ್ತೇನೆ, ಒಂದು ವೇಳೆ ಭಯೋತ್ಪಾದನೆ ಸಮಸ್ಯೆ ಅಲ್ಲ ಎಂದಾದರೆ ದೇಶದಲ್ಲಿ ಭಯೋತ್ಪಾದನೆ ಇಲ್ಲ ಎಂದೇ ಅರ್ಥ. ಹೀಗಾಗಿ ನೀವ್ಯಾಕೆ ತಿರುಗಾಡುವ ಸ್ಥಳದಲ್ಲೆಲ್ಲಾ ಎಸ್ ಪಿಜಿ ಭದ್ರತೆ ಇಟ್ಟುಕೊಂಡಿದ್ದೀರಿ?

ಮಾಜಿ ಪ್ರಧಾನಿ(ನಿಮ್ಮ ತಂದೆ) ರಾಜೀವ್ ಗಾಂಧಿ ಅವರ ಹತ್ಯೆಯಾದ ದಿನದಿಂದ ಈವರೆಗೂ ನಿಮ್ಮ ಕುಟುಂಬದ ಎಲ್ಲಾ ಸದಸ್ಯರಿಗೂ ಎಸ್ ಪಿಜಿ ಭದ್ರತೆ ಇದೆ. ಒಂದು ವೇಳೆ ನಿಮಗೆ ಭಯೋತ್ಪಾದನೆ ಸಮಸ್ಯೆ ಅಲ್ಲಾ ಎಂದು ಭಾವಿಸಿದರೆ, ತಮಗೆ ಎಸ್ ಪಿಜಿ ಭದ್ರತೆಯ ಅಗತ್ಯವಿಲ್ಲ ಎಂದು ಕೇಂದ್ರಕ್ಕೆ ಪತ್ರ ಮುಖೇನ ತಿಳಿಸಿ. ಯಾಕೆಂದರೆ ದೇಶದಲ್ಲಿ ಭಯೋತ್ಪಾದನೆ ಇಲ್ಲ ಎಂದು ನಿಮಗನಿಸಿದೆ. ಅಲ್ಲದೇ ನೀವು ಯಾರಿಗೂ ಹೆದರುವವರೂ ಅಲ್ಲ ಎಂದು ಸುಷ್ಮಾ ಚಾಟಿ ಬೀಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next