Advertisement

ನೋಟು ಅಮಾನ್ಯ ಐಡಿಯಾ ಕೊಟ್ಟದ್ದು ಆರ್‌ಎಸ್‌ಎಸ್‌: ರಾಹುಲ್‌

05:23 PM Feb 13, 2018 | Team Udayavani |

ಹೊಸದಿಲ್ಲಿ : “ಪ್ರಧಾನಿ ನರೇಂದ್ರ ಮೋದಿ ಸರಕಾರಕ್ಕೆ ನೋಟು ಅಮಾನ್ಯದ ಐಡಿಯಾ ಕೊಟ್ಟದ್ದು ಆರ್‌ಬಿಐ ಅಲ್ಲ; ವಿತ್ತ ಸಚಿವ ಅರುಣ್‌ ಜೇತ್ಲಿ ಅವರೂ ಅಲ್ಲ; ರಾಷ್ಟ್ರೀಯ ಸ್ವಯಂ ಸೇವಕ ಸಂಘ’ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿದ್ದಾರೆ.

Advertisement

“ರಾಷ್ಟ್ರೀಯ ಸ್ವಯಂಸೇವಕ ಸಂಘ ಇಂದು ಎಷ್ಟು ಪ್ರಬಲವಾಗಿದೆ ಎಂದರೆ ಅದು ದೇಶದ ಎಲ್ಲ ಸರಕಾರಿ ಸಂಸ್ಥೆಗಳನ್ನು ತನ್ನ ವಶಕ್ಕೆ ತೆಗೆದುಕೊಳ್ಳು ಯತ್ನಿಸುತ್ತಿದೆ; ಮೋಹನ್‌ ಭಾಗವತ್‌ ಜೀ ಅವರು ಏನು ಹೇಳಿದ್ದಾರೆ ಎಂಬುದನ್ನು ನೀವು ಕೇಳಿರಬಹುದು’  ಎಂದು ರಾಹುಲ್‌ ಆರೋಪಿಸಿದರು. 

ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಕೇವಲ ಮೂರು ದಿನಗಳ ಒಳಗೆ ಸೇನೆಯನ್ನು ಸಿದ್ಧಪಡಿಸುವ ಸಾಮರ್ಥ್ಯವಿದೆ ಎಂದು ಹೇಳಿದ್ದ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು, ಭಾರತದ ಸೇನೆಯನ್ನು ಈ ಮೂಲಕ ಅವಮಾನಿಸಿದ್ದಕ್ಕಾಗಿ ದೇಶದ ಮುಂದೆ ಕ್ಷಮೆಯಾಚಿಸಬೇಕು ಎಂದು ರಾಹುಲ್‌ ಆಗ್ರಹಿಸಿದರು. ಸೇನೆಯನ್ನು ಅವಮಾನಿಸುವ ಈ ರೀತಿಯ ಹೇಳಿಕೆ ನೀಡುವುದಕ್ಕೆ ಮೋಹನ್‌ ಭಾಗವತ್‌ ಅವರಿಗೆ ನಾಚಿಕೆಯಾಗಬೇಕು ಎಂದು ರಾಹುಲ್‌ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next