Advertisement

ICMR ಸಲಹೆ; ಬೇಳೆಕಾಳು ಅತಿಯಾಗಿ ಬೇಯಿಸಬೇಡಿ

01:01 AM Jun 02, 2024 | Team Udayavani |

ಹೊಸದಿಲ್ಲಿ: ಬೇಳೆಕಾಳುಗಳನ್ನು ಅತಿ ಯಾಗಿ ಕುದಿಸುವುದರಿಂದ ಅದರಲ್ಲಿ ರುವ ಪೌಷ್ಟಿಕಾಂಶ ಗುಣಮಟ್ಟ ಕಡಿಮೆ ಯಾಗುತ್ತದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನ ಮಂಡಳಿ (ಐಸಿಎಂಆರ್‌) ತಿಳಿಸಿದೆ. ಬೇಳೆಕಾಳುಗಳನ್ನು ಅತಿಯಾಗಿ ಬೇಯಿಸದೆ, ಸಾಧಾರಣವಾಗಿ ಅಥವಾ ಪ್ರಷರ್‌ ಕುಕ್ಕರ್‌ನಲ್ಲಿ ಬೇಯಿಸಬೇಕು. ಇದರಿಂದ ಧಾನ್ಯಗಳಲ್ಲಿನ ಫೈಟಿಕ್‌ ಆ್ಯಸಿಡ್‌ ಪ್ರಮಾಣ ಕಡಿಮೆಯಾಗುತ್ತದೆ. ಬೇಳೆಕಾಳುಗಳಲ್ಲಿನ ಪೌಷ್ಟಿಕಾಂಶದ ಗುಣಮಟ್ಟ ಉತ್ತಮವಾಗಿರುತ್ತದೆ. ಬೇಳೆಕಾಳುಗಳನ್ನು ಅಗತ್ಯಕ್ಕೆ ತಕ್ಕ ನೀರನ್ನು ಮಾತ್ರ ಬಳಸಿ ಬೇಯಿಸಬೇಕು. ಹೆಚ್ಚು ಹೊತ್ತು ಬೇಯಿಸಿದರೆ ದೇಹಕ್ಕೆ ಅಗತ್ಯವಾದ ಲೈಸಿನ್‌ ಆ್ಯಸಿಡ್‌ ನಾಶವಾಗುತ್ತದೆ ಎಂದು ಐಸಿಎಂಆರ್‌ ಮಾರ್ಗಸೂಚಿಯಲ್ಲಿ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next