Advertisement

ಇಶ್ರತ್‌ ಜಹಾನ್‌ ಕೇಸ್‌: ಸಮನ್ಸ್‌ ಪ್ರಶ್ನಿಸಿದ IB ಅಧಿಕಾರಿಗಳು

04:59 PM Jan 03, 2018 | udayavani editorial |

ಅಹ್ಮದಾಬಾದ್‌ : ಇಶ್ರತ್‌ ಜಹಾನ್‌ ಫೇಕ್‌ ಎನ್‌ಕೌಂಟರ್‌ ಕೇಸ್‌ನಲ್ಲಿ ಮ್ಯಾಜಿಸ್ಟ್ರೇಟರ ನ್ಯಾಯಾಲಯ ತಮಗೆ ಸಮನ್ಸ್‌ ಜಾರಿ ಮಾಡಿರುವುದನ್ನು ಗುಪ್ತಚರ ದಳದ ಇಬ್ಬರು ಅಧಿಕಾರಿಗಳು ಪ್ರಶ್ನಿಸಿದ್ದಾರೆ.

Advertisement

ಈ ಅಧಿಕಾರಿಗಳಿಬ್ಬರ ಮೇಲ್ಮನವಿಯನ್ನು ವಿಶೇಷ ಸಿಬಿಐ ನ್ಯಾಯಾಧೀಶ  ಜೆ ಕೆ ಪಂಡ್ಯಾ ಅವರು ಜನವರಿ 6ರಂದು ವಿಚಾರಣೆಗೆ ಎತ್ತಿಕೊಳ್ಳಲಿದ್ದಾರೆ.

ಸಿಬಿಐ ಕೇಸುಗಳ ಮ್ಯಾಜಿಸ್ಟ್ರೇಟರ ಕೋರ್ಟ್‌ ಕಳೆದ ತಿಂಗಳಲ್ಲಿ ಗುಪ್ತಚರ ದಳದ ವಿಶೇಷ ನಿರ್ದೇಶಕ ರಾಜೀಂದರ್‌ ಕುಮಾರ್‌ ಮತ್ತು ಅಧಿಕಾರಿಗಲಾದ ಎಂ ಎಸ್‌ ಸಿನ್ಹಾ , ರಾಜೀವ್‌ ವಾಂಖೇಡೆ ಮತ್ತು ಟಿ ಎಸ್‌ ಮಿತ್ತಲ್‌ ಅವರಿಗೆ ಸಮನ್ಸ್‌ ಜಾರಿ ಮಾಡಿತ್ತು. ನಾಲ್ಕು ವರ್ಷಗಳ ಹಿಂದೆ ಈ ಅಧಿಕಾರಿಗಳನ್ನು  ಸಿಬಿಐ ತನ್ನ ಪೂರಕ ಚಾರ್ಜ್‌ ಶೀಟ್‌ನಲ್ಲಿ  ಹೆಸರಿಸಿದ್ದು  ಆ ಆಧಾರದಲ್ಲಿ ಸಮನ್ಸ್‌ ಜಾರಿಯಾಗಿದೆ ಎಂದು ತಿಳಿದು ಬಂದಿದೆ. 

Advertisement

Udayavani is now on Telegram. Click here to join our channel and stay updated with the latest news.

Next