Advertisement

ಬೀದರ್ ವಾಯು ಸೇನಾ ಕೇಂದ್ರಕ್ಕೆ ಐಎಎಫ್ ಮುಖ್ಯಸ್ಥ ಆರ್.ಡಿ ಮಾಥುರ ಭೇಟಿ

03:59 PM Feb 15, 2021 | Team Udayavani |

ಬೀದರ್: ಭಾರತೀಯ ವಾಯು ಸೇನಾ ತರಬೇತಿ ವಿಭಾಗದ ಮುಖ್ಯಸ್ಥ ಆರ್.ಡಿ ಮಾಥುರ ಅವರು ಬೀದರ ವಾಯು ಸೇನಾ ಕೇಂದ್ರಕ್ಕೆ ಭೇಟಿ ನೀಡಿದರು.

Advertisement

ಪೈಲಟ್ ಹಾಗೂ ಶಸ್ತ್ರಾಸ್ತ್ರ ವ್ಯವಸ್ಥೆ ನಿರ್ವಾಹಕರ ತರಬೇತಿ ಮುಕ್ತಾಯ ಹಾಗೂ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದರು. ಅವರಿಗೆ ಕೇಂದ್ರದ ನಿರ್ವಹಣೆ ಹಾಗೂ ಆಡಳಿತ ಸಿದ್ಧತೆ ಗಳ ಬಗ್ಗೆ ಕೇಂದ್ರದ ಮುಖ್ಯಸ್ಥ ಏರ್ ಕಮಾಡೋರ ನಿಖಿಲೇಶ್ ಗೌತಮ್ ಅವರು ಮಾಹಿತಿ ನೀಡಿದರು.

ವಾಯು ಪಡೆ ಅಧಿಕಾರಿ ಸಮರ್ಥ ಶುಕ್ಲ ಅವರಿಗೆ ಅತ್ಯುತ್ತಮ ವಿದ್ಯಾರ್ಥಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ತರಬೇತಿ ಮುಗಿಸಿದ ತಂಡದಲ್ಲಿ 18 ಪೈಲಟ್ ಹಾಗೂ ಇಬ್ಬರು ಶಸ್ತ್ರಾಸ್ತ್ರ ವ್ಯವಸ್ಥೆ ನಿರ್ವಾಹಕರು ಇದ್ದರು. ಎಲ್ಲ ವಿದ್ಯಾರ್ಥಿ ಗಳಿಗೆ ಪ್ರಶಸ್ತಿ ಹಾಗೂ ಪ್ರಮಾಣ ಪತ್ರ ನೀಡಲಾಯಿತು

Advertisement

Udayavani is now on Telegram. Click here to join our channel and stay updated with the latest news.

Next