Advertisement

Renukaswamy case: ನಟ ದರ್ಶನ್ ಗೆ ಅನ್ಯಾಯವಾಗಿದಲ್ಲಿ ನ್ಯಾಯಕೊಡುಸುತ್ತೇನೆ: ಡಿಸಿಎಂ ಡಿಕೆಶಿ

10:56 AM Jul 24, 2024 | Team Udayavani |

ರಾಮನಗರ: ನಟ ದರ್ಶನ್ ಗೆ  ಅನ್ಯಾಯವಾಗಿದಲ್ಲಿ ನ್ಯಾಯಕೊಡುಸುತ್ತೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

Advertisement

ರಾಮನಗರದ ಚಾಮುಂಡೇಶ್ವರಿ ಕರಗ ಮಹೋತ್ಸವದಲ್ಲಿ ನಟ ದರ್ಶನ್ ಅಭಿಮಾನಿಗಳಿಗೆ  ಡಿಸಿಎಂ ಈ ಬಗ್ಗೆ ಭರವಸೆ ನೀಡಿದ್ದಾರೆ.

ಚಾಮುಂಡೇಶ್ವರಿ ಕರಗ ಮಹೋತ್ಸವಕ್ಕೆ ಆಗಮಿಸಿದ್ದ ಡಿಸಿಎಂ ಭಾಷಣದ ವೇಳೆ ದರ್ಶನ್ ಅಭಿಮಾನಿಗಳು ಡಿಬಾಸ್ ಡಿಬಾಸ್ ಎಂದು ಘೋಷಣೆ ಕೂಗುತ್ತಿದ್ದರು. ಈ ವೇಳೆ ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿದ ಡಿಕೆಶಿ, ದರ್ಶನ್ ಅವರ ಧರ್ಮಪತ್ನಿ ನನ್ನನ್ನು ಭೇಟಿಯಾಗಲು ಸಮಯ ಕೇಳಿದ್ದಾರೆ. ಬುಧವಾರ(ಜು.24 ರಂದು) ಭೇಟಿ ಸಮಯ ನೀಡಿದ್ದೇನೆ. ದರ್ಶನ್ ಗೆ ಅನ್ಯಾಯ ವಾಗಿದ್ದರೆ ನ್ಯಾಯಕೊಡಿಸೋಣ. ಹಾಗೇ ಈ ದೇಶದ ಕಾನೂನನ್ನು ಗೌರವಿಸ ಬೇಕಿದೆ ಕಾನೂನಿನ ಇತಿ ಮಿತಿಯಲ್ಲಿ ಸಹಾಯ ಮಾಡುವುದಾಗಿ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next