Advertisement

ವಾರಾಣಸಿಯಲ್ಲಿ ಮೋದಿ ವಿರುದ್ಧ ತೊಡೆ ತಟ್ಟಿದ ವಜಾಗೊಂಡ ಯೋಧ !

02:46 PM Mar 31, 2019 | Team Udayavani |

ವಾರಾಣಸಿ : 2017 ರಲ್ಲಿ ವಜಾಗೊಂಡಿದ್ದ ಬಿಎಸ್‌ಎಫ್ ಮಾಜಿ ಯೋಧರೊಬ್ಬರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಲೋಕಸಭಾ ಸಮರಕ್ಕೆ ಧುಮುಕಿದ್ದಾರೆ.

Advertisement

ಹರ್ಯಾಣದ ರೆವಾರಿ ಮೂಲದ ತೇಜ್‌ ಬಹದೂರ್‌ ಯಾದವ್‌ ಅವರು ಸ್ವತಂತ್ರ ಅಭ್ಯರ್ಥಿಯಾಗಿ ವಾರಾಣಸಿಯಲ್ಲಿ ಮೋದಿ ವಿರುದ್ಧ ಸ್ಪರ್ಧಿಸುವುದಾಗಿ ಹೇಳಿದ್ದಾರೆ.

ಸೈನಿಕರಿಗೆ ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ ಎಂದು ಆನ್‌ಲೈನ್‌ ವಿಡಿಯೋದಲ್ಲಿ ತೇಜ್‌ ಬಹದೂರ್‌ ಹೇಳಿಕೊಂಡಿದ್ದರು. ಇದೇ ಕಾರಣಕ್ಕಾಗಿ ಅವರನ್ನು ಸೇನೆಯಿಂದ ವಜಾ ಮಾಡಲಾಗಿತ್ತು.

ನನ್ನ ಮೊದಲ ಗುರಿ ಸೇನೆಯಲ್ಲಿರುವ ಭ್ರಷ್ಟಾಚಾರವನ್ನು ಹೊಡೆದೋಡಿಸುವುದು ಎಂದು ತೇಜ್‌ ಬಹದೂರ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next