Advertisement

40 ಶಾಸಕರು ರಾಜೀನಾಮೆ ನೀಡಿದರೂ ತೆಗೆದುಕೊಳ್ಳುವೆ

12:31 AM Feb 08, 2019 | Team Udayavani |

ಕೋಲಾರ: ನಾಲ್ಕಲ್ಲ, ನಲವತ್ತು ಶಾಸಕರು ರಾಜೀನಾಮೆ ನೀಡಿದರೂ ತೆಗೆದುಕೊಳ್ಳುತ್ತೇನೆ ಎಂದು ಸ್ಪೀಕರ್‌ ರಮೇಶ್‌ಕುಮಾರ್‌ ತಿಳಿಸಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಕುರಿತು ಪ್ರತಿಕ್ರಿಯೆ ನೀಡಿದರು. ಬಜೆಟ್ ಅಧಿವೇಶನಕ್ಕೆ ಗೈರು ಹಾಜರಾದ ಶಾಸಕರು ನಿಮ್ಮನ್ನು ಸಂಪರ್ಕ ಮಾಡಿದ್ದಾರೆಯೇ ಎಂಬ ಪ್ರಶ್ನೆಗೆ, ತಮ್ಮನ್ನು ಯಾರೂ ಸಂಪರ್ಕಿಸಿಲ್ಲ ಎಂದು ಸ್ಪಷ್ಟಪಡಿಸಿದರು.

Advertisement

ನಾಲ್ಕು ಮಂದಿ ಶಾಸಕರು ನಿಮಗೆ ರಾಜೀನಾಮೆ ನೀಡಲು ಕಾಯುತ್ತಿದ್ದಾರಂತೆ ಎಂಬ ಪ್ರಶ್ನೆಗೆ ಉತ್ತರಿಸಿದ ರಮೇಶ್‌ಕುಮಾರ್‌, ನಾಲ್ಕು ಅಲ್ಲ, ನಲವತ್ತು ಮಂದಿ ಬಂದು ರಾಜೀನಾಮೆ ನೀಡಿದರೂ ತೆಗೆದುಕೊಂಡು ಬಿಡುತ್ತೇನೆ. ಅದಕ್ಯಾಕೆ ಚಿಂತೆ ಎಂದರು. ಕಂಪ್ಲಿ ಶಾಸಕರ ವಿರುದ್ಧ ಕ್ರಮ ಕೈಗೊಳ್ಳುತ್ತೀರಾ ಎಂಬ ಪ್ರಶ್ನೆಗೆ, ಶಾಸಕರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲು ನಾನ್ಯಾರು, ನನಗೇನು ಸಂಬಂಧ, ನಾನೇನು ಪೊಲೀಸ್‌ ಇಲಾಖೆಯಲ್ಲಿದ್ದೀನಾ, ನನಗೆ ಹೇಗೆ ಗೊತ್ತಾಗಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next