Advertisement

Politics: “ನಾನು ಜೈಲಿಗೆ ಹೋಗುವ ಸಾಧ್ಯತೆ” : ಅರವಿಂದ ಕೇಜ್ರಿವಾಲ್‌ 

11:55 PM Nov 02, 2023 | Team Udayavani |

ಇ.ಡಿ. ವಿಚಾರಣೆಗೆ ಗೈರು ಹಾಜರಾಗಿ ಮಧ್ಯಪ್ರದೇಶದ ಸಿಂಗರೌಲಿಯಲ್ಲಿ ಆಪ್‌ ಸಂಚಾಲಕ, ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌ ಪ್ರಚಾರ ನಡೆಸಿ ದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಫ‌ಲಿತಾಂಶ ಬರುವ ವೇಳೆಗೆ ನಾನು ಜೈಲಿಗೆ ಹೋಗುವ ಸಾಧ್ಯತೆ ಇದೆ.

Advertisement

ಆದರೆ ನನಗೆ ಸೆರೆಮನೆಗೆ ಹೋಗಲು ಹೆದರಿಕೆ ಇಲ್ಲ’ ಎಂದು ಹೇಳಿದ್ದಾರೆ. ಪಂಜಾಬ್‌, ದಿಲ್ಲಿಯ ಜನರು ಈಗಾಗಲೇ ಬದಲಾವಣೆಯ ಚಮತ್ಕಾರ ತೋರಿಸಿದ್ದಾರೆ. ಅದೇ ರೀತಿ ಮಧ್ಯಪ್ರದೇಶದ ಜನರೂ ಮುಂದಿನ ದಿನಗಳಲ್ಲಿ ಅಚ್ಚರಿಯ ತೀರ್ಮಾನ ಪ್ರಕಟಿಸಲಿದ್ದಾರೆ’ ಎಂದರು. ಬಂಧಿಸುವ ಉದ್ದೇಶದಿಂದಲೇ ಇ.ಡಿ. ನನ್ನ ವಿರುದ್ಧ ವಿನಾ ಕಾರಣ ಕೇಸು ದಾಖಲಿಸಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next