Advertisement

ತಾಯಿಯನ್ನು ಕಳೆದುಕೊಂಡೆ: ಕನ್ಹಯ್ಯ ಕುಮಾರ್‌

11:41 AM Oct 30, 2017 | Team Udayavani |

ಬೆಂಗಳೂರು: ಕನ್ಹಯ್ಯ (ಕೃಷ್ಣ)ನ ಜನನ ದೇವಕಿ ನದಿಯ ದಡದಲ್ಲಿ ಆಗಿತ್ತು. ಆದರೆ, ಅವನ ಪಾಲನೆ-ಪೋಷಣೆ ಮಾಡಿದ್ದು ಯಶೋಧೆ. ನನ್ನ ಮತ್ತು ಗೌರಿ ಲಂಕೇಶ್‌ ನಡುವಿನ ಬಾಂಧವ್ಯ ಕೂಡ ಅಂತಹದ್ದೇ ಆಗಿತ್ತು. ಆದರೆ, ದೌರ್ಬಾಗ್ಯವೆಂದರೆ ಆ ತಾಯಿಯನ್ನು ನಾನು ಬೇಗ ಕಳೆದುಕೊಂಡೆ ಎಂದು ಜೆಎನ್‌ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್‌ ಗೌರಿ ಲಂಕೇಶ್‌ ಬಾಂಧವ್ಯದ ಬಗ್ಗೆ ನೆನೆದರು. 

Advertisement

ಸಾಹಿತ್ಯ ಉತ್ಸವದಲ್ಲಿ ಭಾನುವಾರ ಅನುವಾದಿತ “ದಿ ವೇ ಐ ಸೀ ಇಟ್‌- ಎ ಗೌರಿ ಲಂಕೇಶ್‌ ರೀಡರ್‌’ ಕೃತಿ ಬಿಡುಗಡೆ ಮಾಡಿ ಮಾತನಾಡಿದರು. ಜೈಲಿಗೆ ಹೋದಾಗ ನನ್ನನ್ನು ಕೆಲವರು “ಫ್ರೆಂಡ್ಸ್‌ ಗ್ರೂಪ್‌’ನಿಂದ ಹೊರಗಿಟ್ಟರು. ಕೆಲವರು ನಾನು ಜೈಲಿನಿಂದ ಹೊರ ಬಂದಾಗ, ನನ್ನನ್ನು ರಾಜಕೀಯವಾಗಿ ಬಳಸಿ ಕೊಳ್ಳಲು ನೋಡಿದರು. ಆದರೆ, ಅಂತಹ ಸಂದರ್ಭದಲ್ಲಿ ನನ್ನನ್ನು ಅಪ್ಪಿಕೊಂಡು ತಾಯಿ ಪ್ರೀತಿ ಕೊಟ್ಟವರು ಗೌರಿ ಲಂಕೇಶ್‌ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next