Advertisement

ಕರ್ನಾಟಕಕ್ಕೆ ಸಂಬಂಧಪಟ್ಟ ಮೊದಲ ಕಡತಕ್ಕೆ ಎಚ್‌ಡಿಕೆ ಸಹಿ

11:34 PM Jun 12, 2024 | Team Udayavani |

ಬೆಂಗಳೂರು: ಕೇಂದ್ರ ಉಕ್ಕು ಮತ್ತು ಬೃಹತ್‌ ಕೈಗಾರಿಕೆ ಸಚಿವರಾಗಿ ಅಧಿಕಾರ ಸ್ವೀಕರಿಸಿರುವ ಎಚ್‌.ಡಿ. ಕುಮಾರಸ್ವಾಮಿ ಅವರು ಮೊದಲ ಕಡತಕ್ಕೆ ಸಹಿ ಹಾಕಿದ್ದು, ಇದು ಕರ್ನಾಟಕಕ್ಕೆ ಸಂಬಂಧಪಟ್ಟ ದೇವದಾರಿ ಅದಿರು ಗಣಿಗಾರಿಕೆ ಯೋಜನೆಗೆ ಸಂಬಂಧಪಟ್ಟಿರುವುದು ವಿಶೇಷ.

Advertisement

ಬಳ್ಳಾರಿ ಜಿಲ್ಲೆಯಲ್ಲಿ ಉದ್ದೇಶಿತ ದೇವದಾರಿ ಗಣಿಗಾರಿಕೆ ಯೋಜನೆಯನ್ನು ಕುದುರೆಮುಖ ಕಬ್ಬಿಣ ಅದಿರು ಕಂಪೆನಿ ಜಾರಿ ಮಾಡಲಿದೆ. ಕರ್ನಾಟಕ ಸರಕಾರ ಕೂಡ ಈ ಕಡತಕ್ಕೆ ಒಪ್ಪಿಗೆ ಕೊಡಬೇಕು. ಈ ಕಡತಕ್ಕೆ ಕೇಂದ್ರದ ಹಣಕಾಸು ಇಲಾಖೆ ಅನುಮೋದನೆ ಲಭಿಸಬೇಕಿದೆ. ಹಲವು ದಿನಗಳಿಂದ ಈ ಕಡತ ಬಾಕಿ ಬಿದ್ದಿತ್ತು. ಉದ್ಯೋಗ ಭವನದ ಉಕ್ಕು ಸಚಿವಾಲಯದ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದ ಅನಂತರ ಕಡತಕ್ಕೆ ಸಹಿ ಹಾಕಿದರು. ಉಕ್ಕು ಸಚಿವಾಲಯದ ಕಾರ್ಯದರ್ಶಿ ನಾಗೇಂದ್ರನಾಥ ಸಿನ್ಹಾ ಅವರೊಂದಿಗೆ ಈ ಬಗ್ಗೆ ವ್ಯಾಪಕ ಚರ್ಚೆ ನಡೆಸಿದ ಬಳಿಕವೇ ಕುಮಾರಸ್ವಾಮಿ ಈ ನಿರ್ಧಾರ ತೆಗೆದುಕೊಂಡರು.

 

Advertisement

Udayavani is now on Telegram. Click here to join our channel and stay updated with the latest news.

Next