Advertisement

Politics: ನನಗೆ ಹೆಚ್ಚು ಬೆಂಬಲವಿದೆ: ಚುನಾವಣ ಆಯೋಗದ ಮುಂದೆ ಅಜಿತ್‌ ಪ್ರತಿಪಾದನೆ

12:39 AM Oct 07, 2023 | Team Udayavani |

ಹೊಸದಿಲ್ಲಿ: ನಿಜವಾದ ಎನ್‌ಸಿಪಿ ಯಾರದ್ದು ಎಂಬ ಅಂಶದ ಬಗ್ಗೆ ಶುಕ್ರವಾರ ಚುನಾವಣ ಆಯೋಗ ಹೊಸದಿಲ್ಲಿಯಲ್ಲಿ ವಿಚಾರಣೆ ನಡೆಸಿತು. ಈ ವೇಳೆ ಅಜಿತ್‌ ಪವಾರ್‌ ಪರವಾಗಿ ವಾದ ಮಂಡಿಸಿದ ನ್ಯಾಯವಾದಿಗಳಾದ ಎನ್‌.ಕೆ.ಕೌಲ್‌, ಮನೀಂದ್ರ ಸಿಂಗ್‌, “ಎನ್‌ಸಿಪಿಯ 42 ಶಾಸಕರು, ಆರು ವಿಧಾನ ಪರಿಷತ್‌ ಸದಸ್ಯರು ಹಾಗೂ ಇಬ್ಬರು ಸಂಸದರು ಅಜಿತ್‌ ಪವಾರ್‌ ಅವರಿಗೆ ಬೆಂಬಲ ನೀಡಿದ್ದಾರೆ. ಪಕ್ಷದಲ್ಲಿ ಮತ್ತು ಶಾಸಕಾಂಗದಲ್ಲಿ ಅಜಿತ್‌ ಅವರಿಗೆ ದೊಡ್ಡ ಮಟ್ಟದಲ್ಲಿ ಬೆಂಬಲವಿದೆ.

Advertisement

ಶಾಸಕರು ಮತ್ತು ಸಂಸದರ ಸಂಖ್ಯೆ ಹಾಗೂ ಅವರು ಗಳಿಸಿರುವ ಮತಗಳ ಆಧಾರದಲ್ಲಿ ಅವುಗಳನ್ನು ಪರಿಗಣಿಸಿ, ಅಜಿತ್‌ ಪವಾರ್‌ ಅವರ ಬಣವನ್ನು ನಿಜವಾದ ಎನ್‌ಸಿಪಿ ಎಂದು ಗುರುತಿಸಬೇಕು’ ಎಂದು ವಾದ ಮಂಡಿಸಿದರು. ಪಕ್ಷದ ಸಂಸ್ಥಾಪಕ ಶರದ್‌ ಪವಾರ್‌ ಅವರ ಪರವಾಗಿ ವಾದ ಮಂಡಿಸಿದ ಹಿರಿಯ ನ್ಯಾಯ ವಾದಿ ಅಭಿಷೇಕ್‌ ಮನು ಸಿಂಘ್ವಿ, ಪ್ರಾಥಮಿಕ ವಾದ ಮಂಡಿಸಿದ್ದು, ಮುಂದಿನ ವಿಚಾರಣೆಯಲ್ಲಿ ಪೂರ್ಣ ಪ್ರಮಾಣದಲ್ಲಿ ವಾದ ಮಂಡಿಸಲು ಕಾಲಾವಕಾಶ ಕೋರಿದರು. ಚುನಾವಣ ಆಯೋಗದ ವಿಚಾರಣೆಗೂ ಮುನ್ನ ಶರದ್‌ ಪವಾರ್‌ ಅವರು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿ ಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಭೇಟಿಯಾಗಿ, ಮಾತುಕತೆ ನಡೆಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next