Advertisement

ನಾನು ಆರಾಮವಾಗಿದ್ದೇನೆ: ಡಿಸ್ಚಾರ್ಜ್‌ ಬಳಿಕ ನಟ ಮಿಥುನ್‌ ಚಕ್ರವರ್ತಿ ಹೇಳಿಕೆ

12:22 AM Feb 13, 2024 | Team Udayavani |

ಕೋಲ್ಕತಾ: ಎದೆನೋವಿನ ಕಾರಣದಿಂದ ಕಳೆದ ವಾರ ಆಸ್ಪತ್ರೆಗೆ ದಾಖಲಾಗಿದ್ದ ಬಾಲಿವುಡ್‌ ಹಿರಿಯ ನಟ ಮಿಥುನ್‌ ಚಕ್ರವರ್ತಿ ಸೋಮವಾರ ಆಸ್ಪತ್ರೆಯಿಂದ ಬಿಡುಗಡೆ­ಯಾಗಿದ್ದಾರೆ. ತಜ್ಞ ವೈದ್ಯರ ತಂಡವು ಅವರ ಆರೋಗ್ಯ ಪರಿಶೀಲನೆ ನಡೆಸಿದ್ದು, ಸಂಪೂರ್ಣ ಗುಣಮುಖರಾಗಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿ­ರುವ ಚಕ್ರವರ್ತಿ, “ನಾನು ಆರೋಗ್ಯವಾಗಿದ್ದೇನೆ. ಪ್ರಧಾನಿ ಮೋದಿಯವರು ದೂರವಾಣಿ ಕರೆ ಮೂಲಕ ಕ್ಷೇಮ ವಿಚಾರಿಸಿ, ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಕಿವಿಮಾತು ಹೇಳಿದ್ದಾರೆ’ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next