Advertisement

ಲಕ್ಷಣ ಸವದಿ BJP ಬಿಡುತ್ತಿರುವುದು ನನಗೆ ಘಾಸಿಯಾಗಿದೆ : ಸಚಿವ ಡಾ.ಸುಧಾಕರ್

03:35 PM Apr 14, 2023 | Team Udayavani |

ಚಿಕ್ಕಬಳ್ಳಾಪುರ:ಮಾಜಿ ಉಪ ಮುಖ್ಯಮಂತ್ರಿ ಲಕ್ಷಣ ಸವದಿ ಪಕ್ಷದಲ್ಲಿ ಉಳಿದರೆ ಅವರಿಗೆ ಉತ್ತಮ ಭವಿಷ್ಯ ಇದೆಯೆಂದು ಚಿಕ್ಕಬಳ್ಳಾಪುರದಲ್ಕಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ ಹೇಳಿದರು.

Advertisement

ಅವರೊಂದಿಗೆ ನನಗೆ ವೈಯಕ್ತಿಕವಾಗಿ ಉತ್ತಮ ಸಂಬಂಧ ಇತ್ತು. ನಾವು ಇಬ್ಬರು ಉತ್ತಮ ಸ್ನೇಹಿತರು ಕೂಡ. ಆದರೆ ಅವರಿಗೆ ಕ್ಷೇತ್ರ ಕೈ ತಪ್ಪಿರುವ ಬಗ್ಗೆ ಬೇಸರ ಇದೆ. ಅವರು ಪಕ್ಷ ಬಿಡುತ್ತಿರುವ ವಿಚಾರ ನನಗೆ ಘಾಸಿ ಅಗಿದೆ ಎಂದು ಸಚಿವ ಸುಧಾಕರ್ ಹೇಳಿದರು.

ಲಕ್ಷಣ ಸವದಿ ಬಗ್ಗೆ ನಮ್ಮ ಪಕ್ಷದ ರಾಷ್ಟ್ರೀಯ ನಾಯಕರಲ್ಲಿ ಉತ್ತಮ ಅಭಿಪ್ರಾಯ ಇತ್ತು. ಅವರು ಮುಖ್ಯಮಂತ್ರಿಗಳ ಹಾಗೂ ರಾಜ್ಯ ನಾಯಕರ ಜತೆ ಚರ್ಚೆ ಮಾಡಿ ಪಕ್ಷದಲ್ಲಿ ಉಳಿಯಬೇಕಿತ್ತು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next