Advertisement

ನನಗೂ ಬೆದರಿಕೆ ಇದೆ: ಬಿ.ಕೆ. ಹರಿಪ್ರಸಾದ್‌

11:10 PM Feb 18, 2022 | Team Udayavani |

ವಿಧಾನಪರಿಷತ್ತು: ನನಗೂ ಸೇರಿದಂತೆ ಪ್ರತಿಪಕ್ಷ ಕಾಂಗ್ರೆಸ್‌ ಸದಸ್ಯರಿಗೆ ಜೀವ ಬೆದರಿಕೆ ಇದ್ದು, ರಕ್ಷಣೆ ನೀಡುವಂತೆ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್‌ ಸಭಾಪತಿ ಬಸವರಾಜ ಹೊರಟ್ಟಿಯವರಲ್ಲಿ ಮನವಿ ಮಾಡಿದರು.

Advertisement

ಶುಕ್ರವಾರ ಕಲಾಪ ಆರಂಭವಾಗುತ್ತಿದ್ದಂತೆ ಈ ವಿಷಯ ಪ್ರಸ್ತಾವಿಸಿದ ಹರಿಪ್ರಸಾದ್‌, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಅವರು, ಹರಿಪ್ರಸಾದ್‌ ಅವರನ್ನು ಎದುರಿಸುವುದನ್ನು ರೂಢಿಸಿಕೊಳ್ಳಿ, ಅವರಿಗೆ ಮಾತನಾಡಲು ಕೊಡಬೇಡಿ’ ಎಂದು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿರುವ ದೃಶ್ಯ ಮಾಧ್ಯಮಗಳ ವರದಿಯ ಮುದ್ರಣ ಪ್ರತಿಗಳನ್ನು ಪ್ರದರ್ಶಿಸಿದರು. ಅದರಂತೆ ತಮಗೂ ಮತ್ತು ಪ್ರತಿಪಕ್ಷ ಸದಸ್ಯರಿಗೆ ಜೀವ ಬೆದರಿಕೆ ಇದೆ. ಇದಕ್ಕಾಗಿ ರಕ್ಷಣೆ ಕೊಡಬೇಕು ಎಂದು ಸಭಾಪತಿಯವರಲ್ಲಿ ಮನವಿ ಮಾಡಿದರು.

ಈ ವಿಚಾರ ಪರಿಶೀಲಿಸುತ್ತೇನೆ ಎಂದು ಸಭಾಪತಿ ಬಸವರಾಜ ಹೊರಟ್ಟಿಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next