Advertisement

ನಾನು ಕೂಡ ಸಂಘ ಪರಿವಾರದಲ್ಲಿ ಇದ್ದವನು,ಮಂತ್ರಿ ಆಗಿದ್ದೇನೆ: ಡಾ.ಅಶ್ವತ್ಥ್ ನಾರಾಯಣ್

01:26 PM Oct 06, 2021 | Team Udayavani |

ಶಿವಮೊಗ್ಗ: ಉಪ ಚುನಾವಣೆಗೆ ಬಿಜೆಪಿ ಸಂಪೂರ್ಣ ತಯಾರಾಗಿದ್ದು ಈಗಾಗಲೇ ಎಲ್ಲಾ ಬೂತ್ ಮಟ್ಟದಲ್ಲಿ ಸಜ್ಜಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ್ ನಾರಾಯಣ್ ಬುಧವಾರ ಹೇಳಿಕೆ ನೀಡಿದ್ದಾರೆ.

Advertisement

ಎಲ್ಲಾ ರೀತಿಯಿಂದಲೂ ಜನರು ನಮಗೆ ಮತ ನೀಡಲು, ಬೆಂಬಲ ಕೊಡಲು ತಯಾರಿದ್ದಾರೆ. ಅವರ ಆಶೀರ್ವಾದ ಪಡೆದು ಎರಡೂ ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳು ಗೆಲ್ಲುವುದು ಖಡಾಖಂಡಿತ ಎಂದರು.

ವಿಜಯೇಂದ್ರ ಅವರಿಗೆ ಮೊದಲ ಪಟ್ಟಿಯಲ್ಲಿ ಉಪ ಚುನಾವಣೆ ಉಸ್ತುವಾರಿ ನೀಡದಿದ್ದ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿ , ಎಲ್ಲರಿಗೂ ಅವಕಾಶ ಸಿಗುತ್ತದೆ, ಎಲ್ಲರೂ ಪಕ್ಷದ ಕಾರ್ಯಕರ್ತರು.ಯಾರಿಗೆ ಯಾವ ಅವಕಾಶ ಸಿಗುತ್ತದೆ ಅದನ್ನು ಅವರವರು ಮಾಡುತ್ತಿರುತ್ತಾರೆ ಅಷ್ಟೇ ಎಂದರು.

ಆರ್ ಎಸ್ ಎಸ್ ವಿರುದ್ದ ಮಾಜಿ ಸಿಎಂ ಎಚ್ ಡಿ.ಕುಮಾರಸ್ವಾಮಿ ಅವರ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ ಇಡೀ ದೇಶದಲ್ಲಿ ಸಂಘ ಪರಿವಾರದವರು ಅಧಿಕಾರಕ್ಕೆ ಬರುತ್ತಿದ್ದಾರೆ. ಅಲ್ಲಿದ್ದಾರೆ, ಇಲ್ಲಿದ್ದಾರೆ ಎನ್ನುವುದು ಸರಿಯಲ್ಲ.ಇಡೀ ಜನರು ಇವತ್ತು ಪರಿವಾರದ ಜೊತೆಗೆ ಇರುವವರೆ, ಪರಿವಾರದ ಜೊತೆ ಸಂಬಂಧ ಇರುವವರೆ ಆಗಿದ್ದಾರೆ. ಹಾಗಾದರೆ ಪರಿವಾರದ ಹಿನ್ನೆಲೆ ಇರುವವರು ಅಧಿಕಾರ ವಹಿಸಿಕೊಳ್ಳಬಾರದು ಅಂತಾ ಹೇಳಿದ್ದಾರಾ.ಪರಿವಾರದಲ್ಲಿ ಇದ್ದಂತಹವರು ಪ್ರಧಾನಮಂತ್ರಿ, ಮುಖ್ಯಮಂತ್ರಿ ಆಗಿದ್ದಾರೆ.
ಪರಿವಾರದವರು ಎಲ್ಲಾ ಸ್ಥಾನದಲ್ಲಿ ಇದ್ದಾರೆ. ನಾನು ಕೂಡ ಪರಿವಾರದಲ್ಲಿ ಇದ್ದವನು ಮಂತ್ರಿ ಆಗಿದ್ದೇನೆ. ಅದನ್ನೇ ಆಪಾದನೆ ಮಾಡುವುದು ಅಲ್ಲ .ಕೊಟ್ಟಂತಹ ಜವಾಬ್ದಾರಿಯಲ್ಲಿ ಉತ್ತಮ ಕೆಲಸ ಮಾಡಬೇಕು. ಸಮಾಜದ ಪರವಾಗಿ ಕಾರ್ಯ ಮಾಡಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next