Advertisement

ರಾಜಕೀಯ ಕುತಂತ್ರಕ್ಕೆ ಬಲಿಯಾಗಿದ್ದೇನೆ: ಕಣ್ಣೀರಿಟ್ಟ ಬಿಜೆಪಿ ಅಭ್ಯರ್ಥಿ ಮಂಜು

10:15 AM Dec 10, 2021 | Team Udayavani |

ಮಂಡ್ಯ: ಕಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ಅಭ್ಯರ್ಥಿ ಬೂಕಹಳ್ಳಿ ಬಿ.ಸಿ.ಮಂಜು ಸ್ಪಷ್ಟಪಡಿಸಿದರು.

Advertisement

“ನಿನ್ನೆ ಸಂಜೆಯಿಂದಲೇ ಬಿಜೆಪಿ ಅಭ್ಯರ್ಥಿ ಕಣದಿಂದ ನಿವೃತ್ತಿಯಾಗುತ್ತಿದ್ದಾರೆ ಎಂಬ ಗಾಳಿ ಸುದ್ದಿ ಹರಡಿಸುತ್ತಿದ್ದಾರೆ. ಈ ರಾಜಕೀಯ ಕುತಂತ್ರಕ್ಕೆ ನಾನು ಬಲಿಯಾಗಿದ್ದೇನೆ” ಎಂದು ಕಣ್ಣೀರಿಟ್ಟರು.

“ಎಲ್ಲಿ ಏನಾಗಿದೆ ಎಂಬುದು ದೇವರಿಗೆ ಗೊತ್ತು. ನನಗೆ ಗೊತ್ತಾಗುತ್ತಿಲ್ಲ. ಐದಾರು ಬಾರಿ ಮತದಾರರನ್ನು ಭೇಟಿ ಮಾಡಿ ನಿಮ್ಮ ಜತೆ ಇರುತ್ತೇನೆ ಎಂದು ಹೇಳಿದ್ದೆ. ಆದರೆ ನನಗೆ ಈ ಕ್ಷಣ ಕಷ್ಟವಾಗುತ್ತಿದೆ. ಆದರೂ ನಾನು ನಿಮ್ಮ ಜತೆ ಇರುತ್ತೇನೆ” ಎಂದರು.

“ನಾನು ಕಷ್ಟಪಟ್ಟು ದುಡಿದ ಹಣವಾಗಿದೆ. ಆದರೆ ಬೇರೆ ಪಕ್ಷದವರು ಖರ್ಚು ಮಾಡುವಷ್ಟು ಹಣ ನನಗೆ ಖರ್ಚು ಮಾಡಲು ಸಾಧ್ಯವಾಗಿಲ್ಲ. ಅದು ಒಂದು ಕಾರಣವಾಗಿದೆ. ನನಗೆ ಪಕ್ಷದಿಂದಲೂ ಸ್ವಲ್ಪ ಫಂಡ್ ಬಂದಿದೆ. ಆದರೂ ಸಾಧ್ಯವಾಗಲಿಲ್ಲ” ಎಂದರು.

ಇದನ್ನೂ ಓದಿ:ಪರಿಷತ್ ಫೈಟ್: ಮತದಾನ ಆರಂಭ, ಗೆಲುವಿನ ವಿಶ್ವಾಸದಲ್ಲಿ ಪಕ್ಷಗಳು

Advertisement

“ಮತದಾರರು ಹಣದ ಆಮಿಷಕ್ಕೆ ಬಲಿಯಾಗಬಾರದು. ನೀವು ನನ್ನ ಕೈಬಿಡಲ್ಲ ಎಂಬ ನಂಬಿಕೆ ನನಗಿದೆ. ಗಾಳಿ ಸುದ್ದಿಗಳಿಗೆ ಕಿವಿಗೊಡಬೇಡಿ. ಈ ರೀತಿಯ ಗಾಸಿಪ್ ನಿಂದ ನನಗೆ ಇಂಥ ಪರಿಸ್ಥಿತಿ ಬಂದಿದೆ” ಎಂದು ಭಾವುಕರಾದರು

Advertisement

Udayavani is now on Telegram. Click here to join our channel and stay updated with the latest news.

Next